ಗಾಂಧಿನಗರ ಗಾರ್ಡ್ ಸೆಡ್ ಬಳಿ ಬಾವಿಗೆ ಬಿದ್ದ ಆಡು ಮರಿ

0

ಸುಳ್ಯ ಗಾಂಧಿನಗರ ಗಾರ್ಡ್ ಸೆಡ್ ಬಳಿ ಮನೆಯೊಂದರ ಬಾವಿಗೆ ಆಕಸ್ಮಿಕವಾಗಿ ಆಡು ಮರಿಯೊಂದು ಬಿದ್ದಿದ್ದು ರಂಜಾನ್ ಹಬ್ಬದ ಸಡಗರದಲ್ಲಿದ್ದ ಅಬ್ದುಲ್ ರಹೀಮ್ ಕಟ್ಟೆಕಾರ್ಸ್ ಎಂಬುವವರು ಬಾವಿಗಿಳಿದು ಆಡು ಮರಿಯನ್ನು ರಕ್ಷಿಸಿದ ಘಟನೆ ಇಂದು ವರದಿಯಾಗಿದೆ.

ಕಬೀರ್ ಕಟ್ಟೆಕಾರ್ಸ್ ಎಂಬುವವರ ಮನೆಯ ವಠಾರದಲ್ಲಿ ಹೊರಗಿನಿಂದ ಬಂದ ಆಡುಗಳ ಗುಂಪು ಬಾವಿಯ ಬದಿಯಲ್ಲಿ ಹೋಗುತ್ತಿದ್ದ ಸಂದರ್ಭ ಗುಂಪಿನಲ್ಲಿದ್ದ ಮರಿಯೊಂದು ಆಯತಪ್ಪಿ ಬಾವಿಯೊಳಗಡೆ ಬಿದ್ದಿದೆ. ಬಿದ್ದ ಆಡು ಮರಿಯ ಕೂಗಾಟ ಕೇಳಿದ ಮನೆಯವರು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು ರಂಜಾನ್ ಹಬ್ಬದ ಸಡಗರದಲ್ಲಿದ್ದ ಅಬ್ದುಲ್ ರಹಿಮಾನ್ ಎಂಬುವರು ಕೂಡಲೆ ಸ್ಥಳಕ್ಕೆ ಬಂದು ಬಾವಿಯೊಳಗೆ ಇಳಿದು ಆಡುಮರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.