ಕನಕಮಜಲಿನ ಆನೆಗುಂಡಿಯಲ್ಲಿ ನಿಯಂತ್ರಣ ತಪ್ಪಿ ಉರುಳಿದ ಕಾರು

0

ತಮಿಳ್ನಾಡಿನ ಸೇಲಂನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನೋವಾ ಕಾರೊಂದು ಕನಕಮಜಲಿನ ಆನೆಗುಂಡಿ ಚಡವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಮರಕ್ಕೆ ಗುದ್ದಿ ನಿಂತ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಾರಲ್ಲಿ ಚಾಲಕ ಮಾತ್ರ ಇದ್ದು ಗಾಯಗಳಾಗಿಲ್ಲ.
ಐವರ್ನಾಡಿನ ಜಬಳೆ ಸತೀಶ್ ರವರ ಕ್ರೇನ್ ಸ್ಥಳಕ್ಕೆ ಬಂದಿದ್ದು ಕಾರನ್ನು ಮೇಲಕ್ಕೆತ್ತುವ ಪ್ರಕ್ರಿಯೆಯಲ್ಲಿ ತೊಡಗಿದೆ.