ಪಂಜ : ಕುಮಾರಧಾರ ನದಿಯಲ್ಲಿ ಸತ್ತ ಮೊಸಳೆ- ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮನ

0

ಪಂಜ ಸಮೀಪದ ಕೋಡಿಂಬಾಳ ಗ್ರಾಮದ ಕುಮಾರಧಾರ ನದಿಯ ಪುಳಿಕುಕ್ಕು ಸೇತುವೆ ಅಡಿಯಲ್ಲಿ ಮೊಸಳೆಯೊಂದು ಸತ್ತು ಬಿದ್ದಿರುವ ಘಟನೆ ಏ.12 ರಂದು ವರದಿಯಾಗಿದೆ.

ಹೊಳೆ ನೀರಿನ ಹರಿವಿನ ಪ್ರಮಾಣ ಇಳಿಕೆಯಾಗಿದ್ದು ಮೊಸಳೆ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಲ್ಲಿಂದ
ಸ್ವಲ್ಪ ದೂರದಲ್ಲಿ ನಾಕೂರು ಗಯವಿದೆ. ಮೊಸಳೆಗಳು ಕಾದಾಡಿ ಕೆಲವೊಮ್ಮೆ ಸಾಯುತ್ತದೆ. ಅಥವಾ ಕಲುಷಿತ ನೀರು , ಬೇರೆ ಯಾವುದೇ ಕಾರಣ ತನಿಖೆ ಬಳಿಕ ತಿಳಿಯಲಿದೆ.

ಪಂಜ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಹೊಳೆಯಿಂದ ಮೊಸಳೆಯನ್ನು ತೆರವು ಗೊಳಿಸಿದ್ದು. ಮುಂದಿನ
ತನಿಖೆ ನಡೆಯುತ್ತಿದೆ.