ಬಾಬು ಮಣಿಯಾಣಿ ಮರಸಂಕ ಅಸೌಖ್ಯದಿಂದ ನಿಧನ

0

ಜಾಲ್ಸೂರು ಗ್ರಾಮದ ಮರಸಂಕ ಬಾಬು ಮಣಿಯಾಣಿ ಅವರು ಅಸೌಖ್ಯದಿಂದಾಗಿ ಎ.13ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಜಾಲ್ಸೂರಿನಲ್ಲಿ ಪಿಕಪ್ ಚಾಲಕರಾಗಿ ದುಡಿಯುತ್ತಿದ್ದ ಬಾಬು ಮಣಿಯಾಣಿ ಅವರು ಇತ್ತೀಚೆಗಷ್ಟೆ ಅಸೌಖ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಮೃತರು ಅವಿವಾಹಿತರಾಗಿದ್ದು, ತಾಯಿ ಕುಂಞಿತ್ತೇಯಿ, ಸಹೋದರರಾದ ರಮೇಶ್ ಎಂ.ಎಸ್., ನಾರಾಯಣ ಎಂ.ಎಸ್., ಸುಧಾಕರ ಎಂ.ಎಸ್., ಸದಾನಂದ ಎಂ.ಎಸ್. ಸಹೋದರಿಯರಾದ ಶ್ರೀಮತಿ ಲೀಲಾವತಿ, ಕಾವೇರಿ, ಜಯಂತಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.