ಸವಣೂರು : ಕತ್ತಿಯಿಂದ ಕಡಿದ ಪ್ರಕರಣ – ಪರಸ್ಪರ ದೂರು

0

ಸವಣೂರು ಗ್ರಾಮದ ಮಲೆತ್ತಾರು ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಕತ್ತಿಯಿಂದ ಕಡಿದ ಘಟನೆ ನಡೆದಿದ್ದು
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದು ಎರಡೂ ಕಡೆಯವರ ಮೇಲೂ ಪ್ರಕರಣ ದಾಖಲಾಗಿದೆ.
ಕೃಷ್ಣಪ್ಪ ಗೌಡ ಎಂಬವರಿಗೆ ದಯಾನಂದ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು ಗಾಯಗೊಂಡ ಕೃಷ್ಣಪ್ಪ ಗೌಡರವರು ಮಂಗಳೂರಿನ ಇಂಡಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.


ಕೃಷ್ಣಪ್ಪ ಗೌಡರವರು ತನ್ನ ಮನೆಗೆ ಕೆಲಸಕ್ಕೆ ಬಂದಿದ್ದ ಕೂಲಿ ಕೆಲಸದವರನ್ನು ಓಮ್ನಿ ಕಾರಿನಲ್ಲಿ ಸುಳ್ಯಕ್ಕೆ ಬಿಟ್ಟು ಬಂದು ತನ್ನ ಅಕ್ಕನ ಮನೆಯಲ್ಲಿ ಮಾತನಾಡಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ರಾತ್ರಿ ದಯಾನಂದ ಎಂಬವರು ಅವಿತು ಕುಳಿತು ಕತ್ತಿಯಿಂದ ಕಡಿದಿರುವುದಾಗಿ ಕೃಷ್ಣಪ್ಪ ಗೌಡರವರ ಪುತ್ರ ಪ್ರಕಾಶ ಎಂಬವರು ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದಯಾನಂದ ಎಂಬವರು ಕೃಷ್ಣಪ್ಪ ಗೌಡ ಮತ್ತು ಪ್ರಕಾಶ್ ಎಂಬವರ ಮೇಲೆ ಪೋಲೀಸ್ ದೂರು ನೀಡಿದ್ದು ದೂರಿನಲ್ಲಿ ನನ್ನ ಜಮೀನಿನ ಮುಖಾಂತರ ಬೋರ್ ವೆಲ್ ಲಾರಿ ಕೊಂಡೋಗಿದ್ದು ಇದರಿಂದ ಪೈಪುಗಳು ಒಡೆದು ಹೋಗಿದೆ ಇದನ್ನು ಕೇಳಿದಕ್ಕೆ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಕೃಷ್ಣಪ್ಪ ಹಾಗೂ ಪ್ರಕಾಶ್ ಎಂಬವರ ಮೇಲೆ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆಯೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.