ಮಡಿಕೇರಿ ಪ್ರಜಾಧ್ವನಿ -2 ಚುನಾವಣಾ ಪ್ರಚಾರ ಸಭೆ : ಪೆರಾಜೆ , ಚೆಂಬು, ಕೊಡಗು ಸಂಪಾಜೆ ಗ್ರಾಮದಿಂದ ಕಾಂಗ್ರೇಸ್ ಕಾರ್ಯಕರ್ತರು ಭಾಗಿ

0


ಮಡಿಕೇರಿ ನಡೆಯುತ್ತಿರುವ ಪ್ರಜಾಧ್ವನಿ -2 ಚುನಾವಣಾ ಪ್ರಚಾರ ಸಭೆಯು ಎ.14 ರಂದು ನಡೆಯಿತು. ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿರಾಜಪೇಟೆ ಶಾಸಕರಾದ ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂತರಗೌಡ , ಸನ್ಮಾನ್ಯ ಸಚಿವರಾದ ವೆಂಕಟೇಶ್ , ಮಹಾದೇವಪ್ಪ ಹಾಗೂ ಇನ್ನೂ ಅನೇಕ ಮುಖಂಡರು ಹಾಜರಿದ್ದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದ ನಿಮಿತ್ತ ಅವರ ಚಿತ್ರಪಟಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ನಂತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು.