ಗೋಪಾಲಕೃಷ್ಣ ಅಂಬೆಕಲ್ಲು ನಿಧನ

0

ಅಂಬೆಕಲ್ಲು ಮುತ್ತಯ್ಯ ಗೌಡ ಯಶೋದಾ ದಂಪತಿ ಪುತ್ರ , ಸಂಪಾಜೆ ನಿವಾಸಿ ಗೋಪಾಲಕೃಷ್ಣ ಅಂಬೆಕಲ್ಲು ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಇಂಜಿನಿಯರ್ ಆಗಿದ್ದ ಅವರು‌ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರು. ವಿಶ್ರಾಂತ ಜೀವನದಲ್ಲಿ ಪ್ರಗತಿಪರ ಕೃಷಿಕನಾಗಿ ಸಂಪಾಜೆಯಲ್ಲಿ ನೆಲೆಸಿದ್ದರು.

ಸಂಪಾಜೆಯ ವಿಶಾಲ ಜಾಗದಲ್ಲಿ ರಂಬುಟಾನ್ ಬೆಳೆಯುವ ಮೂಲಕ ಅಡಿಕೆ ಕೃಷಿಗೆ ಪರ್ಯಾಯ ಕೃಷಿ ಆವಿಷ್ಕರಿಸಿದ್ದ ಇವರು ಈ ಬೆಳೆಯ ಕುರಿತು ಮಾಹಿತಿಯನ್ನೂ ನೀಡುತ್ತಿದ್ದರು.

ಇವರ ಪುತ್ರ ಸೃಷ್ಟಿ ಆಸ್ಟ್ರೇಲಿಯಾದ ನಿವಾಸಿಯಾಗಿದ್ದು ಅವರ ಆಗಮನದ ಬಳಿಕ
ಮೃತರ ಅಂತ್ಯ ಕ್ರಿಯೆ ನಡೆಯುವ ಸಾಧ್ಯತೆಗಳಿವೆ.