ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ- ಮಕ್ಕಳ ಹಬ್ಬ – ಸಮಾರೋಪ

0

ಪಂಜದ ಡ್ಯಾನ್ಸ್ ಅಂಡ್ ಬೀಟ್ಸ್ ನೇತೃತ್ವದಲ್ಲಿ ಅದ್ವೈತ ಮಕ್ಕಳ ಬೇಸಿಗೆ ಶಿಬಿರ “ಪಂಜ ಮಕ್ಕಳ ಹಬ್ಬ 2024” ಏ.20 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮಾರೋಪ ಗೊಂಡಿತು.


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ,ಪಂಜ ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ಕೆ.ಸಂತೋಷ್ ರೈ, ಸುಳ್ಯ ಸಂತೃಪ್ತಿ ಹೋಟೆಲ್ ಮಾಲಕ ನವೀನ್ ,ಶಿಬಿರದ ನಿರ್ದೇಶಕರಾದ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆ ನಿರ್ದೇಶಕ ಜೀವನ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.