ಕುಕ್ಕಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ಕ್ಷೇತ್ರದಲ್ಲಿ ತೀರ್ಥಬಾವಿ ನಿರ್ಮಾಣಕ್ಕೆ ಮುಹೂರ್ತ

0

ಕಾಣಿಯೂರು: ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ತೀರ್ಥಬಾವಿಯ ನಿರ್ಮಾಣಕ್ಕೆ ಮುಹೂರ್ತವು ನಡೆಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಬಾಲಕೃಷ್ಣ ಪುರೋಹಿತರು ವಿವಿಧ ಪೂಜಾ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ಆಡಳಿತ ಸಮಿತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮರೋಳಿ, ಗೌರವ ಸಲಹೆಗಾರರಾದ ಜನಾರ್ದನ ಆಚಾರ್ಯ ಕಾಣಿಯೂರು, ಸಂಜಯ್ ಆಚಾರ್ಯ ಬೆಳ್ಳಾರೆ, ಕಾರ್ಯದರ್ಶಿಗಳಾದ ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ಪ್ರಧಾನ ಅರ್ಚಕ ಬಾಲಕೃಷ್ಣ ಪುರೋಹಿತ್ ಕುಕ್ಕಟ್ಟೆ, ಉಪಾಧ್ಯಕ್ಷರಾದ ಸರೋಜಿನಿ ಆಚಾರ್ಯ ಕಡಬ, ಕೋಶಾಧಿಕಾರಿ ಈಶ್ವರ ಆಚಾರ್ಯ, ಸದಸ್ಯರಾದ ಚಂದ್ರಯ್ಯ ಆಚಾರ್ಯ ಅಬೀರ, ದಿನೇಶ್ ಆಚಾರ್ಯ ಬಾಚೋಡಿ, ಕ್ಷೇತ್ರದ ಸೇವಾ ಸಮಿತಿಯ ಗೌರವಾಧ್ಯಕ್ಷ ವಸಂತ ನಡುಬೈಲು, ಕಾರ್ಯದರ್ಶಿ ಸುಜಿತ್ ಆಚಾರ್ಯ, ಕೇಶವ ನಾಯ್ಕ್ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಆಮಂತ್ರಣ ಅನಾವರಣ

ಕುಕ್ಕಟ್ಟೆ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವವು ಜೂ 12ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದಲ್ಲಿ ಅನಾವರಣ ಗೊಳಿಸಲಾಯಿತು.