ಆಲೆಟ್ಟಿಯ ಹಲವು‌ ಕಡೆಗಳಲ್ಲಿ ಬೀಸಿದ ಬಿರುಗಾಳಿಯಿಂದ ಅಪಾರ ಹಾನಿ

0

ಮನೆ ಮೇಲೆ ಮರ
ಬಿದ್ದು ಹಾನಿ,
ಮರಗಳುಧರಶಾಯಿ,
ಕೃಷಿ ತೋಟ ನಾಶ – ವಿದ್ಯುತ್ ಸಂಪರ್ಕ ಕಡಿತ

ಆಲೆಟ್ಟಿ ಗ್ರಾಮದ ತಲೆಪಳ, ಮೈಂದೂರು, ಭೂತಕಲ್ಲು ಕಟ್ಟೆಕ್ಕಳ ಈ ಭಾಗದಲ್ಲಿ ಇಂದು ಸಂಜೆ ಹಠತ್ತಾಗಿ ಬೀಸಿದ ಬಿರುಗಾಳಿಯಿಂದ ಮರಗಳು ಧರ ಶಾಯಿಯಾಗಿದೆ.
ಕೃಷಿ ‌ತೋಟಕ್ಕೆ ನುಗ್ಗಿದ ಗಾಳಿಯು ಅಡಿಕೆ ,ರಬ್ಬರ್ ಮರಗಳನ್ನು ಕಿತ್ತು ಬಿಸಾಕಿದೆ.
ತಲೆಪಳ ಎಂಬಲ್ಲಿ
ಮನೆಯ ಮೇಲೆ ಮರ ಬಿದ್ದುಹಾನಿಯಾಗಿರುವುದಾಗಿ ತಿಳಿದು ಬಂದಿದೆ.
ಸಂಜೆಯಾಗುತ್ತಲೆ ಮಳೆ ಸುರಿಯಲಾರಂಭಿಸಿದ ಸಮಯದಲ್ಲಿ ಈ ಭಾಗದಲ್ಲಿ ವ್ಯಾಪಕ ಗಾಳಿಯು ಬೀಸತೊಡಗಿದೆ. ಕುಡೆಕಲ್ಲಿನ ಮೈಂದೂರು ಸೀತರಾಮ ಗೌಡ ಮತ್ತು ಮನ್ಮಥ ರವರ ತೋಟದಲ್ಲಿ ಸುಮಾರು ಅಡಿಕೆ ರಬ್ಬರ್ ಗಿಡಗಳು ನಾಶಗೊಂಡಿವೆ. ತಲೆಪಳ ಎಂಬಲ್ಲಿ ದೊಡ್ಡ ಗಾತ್ರದ ಮರಗಳು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ತಲೆಪಳದಲ್ಲಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಾಳಿಯ ರಭಸಕ್ಕೆ ಸಿಕ್ಕಿ ಪುಡಿಯಾಗಿದೆ ಎಂದು ತಿಳಿದು ಬಂದಿದೆ.