ಸುಳ್ಯ ಎಂ.ಜಿ.ಎಂ. ಶಾಲೆಗೆ ದೇಣಿಗೆ

0

ಇತ್ತೀಚಿಗೆ ನಿಧನರಾದ ನೀಲಮ್ಮ ಕೃಷ್ಣಪ್ಪ ಗೌಡ ಪಿಂಡಿಮನೆ ಇವರ ಸ್ಮರಣಾರ್ಥ ಅರಂತೋಡು ಗ್ರಾಮ ಗೌಡ ಸಮಿತಿಯ ನಿರ್ಣಯದಂತೆ ಶವ ಸಂಸ್ಕಾರದ ದಿನ ಸಂಗ್ರಹವಾದ ಮೊತ್ತ ರೂ 12,510/- ನ್ನು ಮೃತರ ಮಕ್ಕಳು ಸುಳ್ಯ ದ ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗೆ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಮೃತರ ಪುತ್ರ ತಿಮ್ಮಯ್ಯ ಪಿಂಡಿಮನೆ ಶಾಲಾ ಸಂಚಾಲಕರಾದ ದೊಡ್ಡಣ್ಣ ಬರೆಮೇಲು, ಕೆ ಆರ್ ಗಂಗಾಧರ್, ಬೆಳ್ಯಪ್ಪ ಗೌಡ ಬಳ್ಳಡ್ಕ, ದಿನೇಶ್ ಮಡಪ್ಪಾಡಿ, ಚಂದ್ರ ಶೇಖರ್ ಪೇರಾಲ್ ಹಾಗೂ ಮುಖ್ಯ ಗುರುಗಳು ಉಪಸ್ಥಿತರಿದ್ದರು