ಸುಳ್ಯದ ಹಲವೆಡೆ ಕಾಂಗ್ರೆಸ್ ಮತಯಾಚನೆ

0

ಸುಳ್ಯದ ಎ.ಪಿ.ಎಂ.ಸಿ. ಯಾರ್ಡ್, ದೇವಸ್ಥಾನ ರಸ್ತೆ ಸಹಿತ ನಗರದ ವಿವಿದ ಕಡೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮತ ಯಾಚನೆ ನಡೆಸಿದರು.

ತಂಡದ ನೇತೃತ್ವ ವಹಿಸಿದ ಕಾಂಗ್ರೆಸ್ ಹಿರಿಯ ನಾಯಕ, ನ.ಪಂ. ಸದಸ್ಯ ಎಂ.ವೆಂಕಪ್ಪ‌ ಗೌಡರು ಗ್ಯಾರಂಟಿ ಯೋಜನೆಯ ವಿವರ ನೀಡಿದರಲ್ಲದೆ, ಕೇಂದ್ರದಲ್ಲಿ ಅಧಿಕಾರಕ್ಕೆ‌ಬಂದರೆ ಸಿಗುವ ಯೋಜನೆಯ‌ ಕುರಿತು ವಿವರಣೆ ನೀಡಿದರು.