ಗುತ್ತಿಗಾರಿನಲ್ಲಿ ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭ

0

ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.24 ರಂದು
ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭಗೊಂಡಿತು.

ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿದರು.

ಈ ಸಂದರ್ಭ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ವಕೀಲರಾದ ಹರೀಶ್ ಪೂಜಾರಿಕೋಡಿ, ರಾಘವೇಂದ್ರ ಬೇಕರಿಯ ಮಾಲಕ ಅನಿಲ್, ರಾಮಚಂದ್ರ ಗೌಡ ಪಾರೆಪ್ಪಾಡಿ ಬಾಳೆಗುಡ್ಡೆ, ಶ್ರೀಮತಿ ಲೀಲಾವತಿ ರಾಮಚಂದ್ರ, ಪುನೀತ್ ಪಾರೆಪ್ಪಾಡಿ ಬಾಳೆಗುಡ್ಡೆ, ಶ್ರೀಮತಿ ದಿವ್ಯಾ ವಿಶ್ವನಾಥ್, ರಾಮಣ್ಣ ಗೌಡ, ಶ್ರೀಮತಿ ಭವ್ಯ ನಿತಿನ್, ಲೋಕೇಶ್ , ಧನುಷ್, ಸೋಹನ್ ಲಾಲ್, ಚಿದಾನಂದ, ಮಹೇಶ, ಚಿಂತನ್,ಸಮೃದ್ಧ್, ಸಚಿನ್, ಅಪೊಲೊ ಪೈಂಟ್ ಕಂಪನಿಯ ಮಂಗಳೂರು ಮ್ಯಾನೇಜರ್ ಶ್ರೀನಿವಾಸ್, ಸೂಪರ್ ವೈಸರ್, ಮತ್ತಿತರರು ಉಪಸ್ಥಿತರಿದ್ದರು.

ನೂತನ ಅಂಗಡಿ ಶುಭಾರಂಭದ ಪ್ರಯುಕ್ತ ಏ.22 ರಂದು ಗಣಹವನ ನಡೆಸಲಾಯಿತು.
ಈ ಅಂಗಡಿಯಲ್ಲಿ
ಯಾವುದೇ ತರಹದ ಪೈಂಟ್
ಗಳು ಲಭ್ಯವಿದ್ದು, ಕಟ್ಟಡ, ಅಂಗಡಿ, ಕೊಠಡಿ, ಗೋಡೆ ಮತ್ತಿತರವುಗಳಿಗೆ ಸೂಕ್ತ ಸಮಯದಲ್ಲಿ ಬಣ್ಣ ಬಳಿದು ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ನಿತಿನ್ ಪಾರೆಪ್ಪಾಡಿ, ಬಾಳೆಗುಡ್ಡೆ ತಿಳಿಸಿದ್ದಾರೆ.