ಬಿಳಿಮಲೆ: ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ

0

ಕೂತ್ಕುಂಜ ಗ್ರಾಮದ ಬಿಳಿಮಲೆಯಲ್ಲಿ ಬಿಳಿಮಲೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಪರಿವಾರ ದೈವ ಸಾನಿಧ್ಯಗಳ ಗುಡಿಗಳ ಪುನ: ನಿರ್ಮಾಣ ಪೂರೈಸಿ ಬ್ರಹ್ಮ ಶ್ರೀ ವೇದಮೂರ್ತಿ ಶ್ರೀ ಕೇಶವ ಜೋಯಿಸರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವವು ಏ.30 ರಿಂದ ಮೇ.1 ರ‌ತನಕ ಜರುಗಿತು.

ಮೇ.5 ರಿಂದ ಮೇ.6 ತನಕ ದೈವಗಳ ನೇಮೋತ್ಸವ ನಡೆಯಿತು. ಬಿಳಿಮಲೆ ಕುಟುಂಬದ ಯಜಮಾನ ಸೀತಾರಾಮ ಬಿಳಿಮಲೆ, ತರವಾಡು ಮನೆಯ ಮುಖ್ಯಸ್ಥ ವಸಂತ ಬಿಳಿಮಲೆ ,ಕುಟುಂಬಸ್ಥರು, ನೆಂಟರಿಷ್ಟರು, ಊರ ಪರವೂರ ಬಂಧು ಮಿತ್ರರು ಪಾಲ್ಗೊಂಡು ಶ್ರೀ ದೈವ ದೇವರ ಪ್ರಸಾದ ಸ್ವೀಕರಿಸಿದರು.