![](https://sullia.suddinews.com/wp-content/uploads/2024/06/39c8a0bd-c301-4c7e-8f96-fd65ad4c4527-1024x576.jpg)
ಮಳೆಗಾಲದ ಮಳೆಯ ಕಾರಣದಿಂದಾಗಿ ಅಲ್ಲಲ್ಲಿ ಅನಾಹುತಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಚಾಮಡ್ಕ ಜಲಪಾತ ಮತ್ತು ಸೋಣಂಗೇರಿಯ ಜಲಪಾತದ ವೀಕ್ಷಣೆಗೆ ಜನರು ಹೊಳಗೆ ಇಳಿಯದಂತೆ ಜಿಲ್ಲಾಧಿಕಾರಿಗಳು ನಿಷೇಧ ವಿಧಿಸಿದ್ದು, ಸ್ಥಳೀಯ ಗ್ರಾ.ಪಂ. ತಡೆಬೇಲಿ ಕಟ್ಟಿ ಸಾರ್ವಜನಿಕರು ಫಾಲ್ಸ್ನತ್ತ ಹೋಗದಂತೆ ಕ್ರಮ ವಹಿಸಿದೆ.
![](https://sullia.suddinews.com/wp-content/uploads/2024/06/dcfb110d-9e2c-4eea-a759-c4227ef9bc8a-1024x576.jpg)
ಇಂದು ಸಂಜೆ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ. ಇ.ಒ. ರಾಜಣ್ಣರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜರೊಂದಿಗೆ ಚಾಮಡ್ಕ ಪಾಲ್ಸ್ಗೆ ಹೋಗಿ ತಡೆಬೇಲಿ ಕಟ್ಟಿಸುವ ಕಾರ್ಯ ನಡೆಸಿದರು. ಸಾರ್ವಜನಿಕರಿಗೆ ಸೂಚನೆಗಾಗಿ ಕೆಂಪು ಪಟ್ಟಿಯನ್ನು ಕೂಡಾ ಕಟ್ಟಲಾಗಿದ್ದು, ಪ್ರವೇಶ ನಿಷೇಧದ ಫಲಕವನ್ನು ಹಾಕಲಾಗಿದೆ.
![](https://sullia.suddinews.com/wp-content/uploads/2024/06/f3b7ee33-3f1c-4185-98aa-01ffb91e631f-1024x576.jpg)
ಈ ನಿಷೇಧವನ್ನು ಉಲ್ಲಂಘಿಸಿ ಯಾರಾದರೂ ಫಾಲ್ಸ್ಗೆ ಹೋದುದು ಕಂಡರೆ ದಂಡದ ಜೊತೆಗೆ ಕ್ರಿಮಿನಲ್ ಕೇಸು ದಾಖಲಿಸಲು ನಿರ್ದೇಶನವಿರುವುದಾಗಿ ತಹಶೀಲ್ದಾರ್ ಮತ್ತು ಇ.ಒ.ತಿಳಿಸಿದ್ದಾರೆ.