ಸುಳ್ಯ : ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಡಾ. ರಂಗಯ್ಯ ಎಸ್ ಆಯ್ಕೆ

0

ಉಪಾಧ್ಯಕ್ಷರಾಗಿ ವಿಶ್ವನಾಥ ನಾಯರ್ ಎಂ.

ಸುಳ್ಯದ ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ ಪದಾಧಿಕಾರಿಗಳ ಆಯ್ಕೆ ಸಂಧ್ಯಾರಶ್ಮಿ ಸಭಾಭವನಲ್ಲಿ
ಜೂನ್ 29 ರಂದು ನಡೆಯಿತು.

ಚುನಾವಣಾಧಿಕಾರಿ ಎನ್. ಜೆ ಗೋಪಾಲ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಅಧ್ಯಕ್ಷ ಸ್ಥಾನಕ್ಕೆ ಡಾ. ರಂಗಯ್ಯ ರವರ ಹೆಸರನ್ನು ಬಾಬು ಗೌಡ ಸೂಚಿಸಿದರು. ಕಮಲಾಕ್ಷಿ ವಿ ಶೆಟ್ಟಿ ಅನುಮೋದಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ನಾಯರ್ ರವರ ಹೆಸರನ್ನು ಸುಬ್ರಹ್ಮಣ್ಯ ಹೊಳ್ಳಸೂಚಿಸಿದರು.ಬಾಬುಗೌಡ ಅನುಮೋದಿಸಿದರು.ಅವಿರೋಧ ಆಯ್ಕೆ ಬಳಿಕ ನೂತನ ಆಯ್ಕೆಯಾದ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಹೂ ಗುಚ್ಛ ನೀಡಿ ಗೌವಿಸಲಾಯಿತು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಡಾ. ರಂಗಯ್ಯ ” ನಾವು ಒಗ್ಗಟ್ಟಿನಿಂದ ಕೈ ಜೋಡಿಸಿ ಸೊಸೈಟಿಯನ್ನು ಅಭಿವೃದ್ದಿಪಡಿಸಿ, ಇತರ ಜಿಲ್ಲೆಯಲ್ಲೂ ಸಂಸ್ಥೆ ಸ್ಥಾಪನೆಯಾಗಿ ಉನ್ನತಕ್ಕೆ ಬೆಳೆಯಲಿ” ಎಂದು ಹೇಳಿದರು.
ನೂತನ ಉಪಾಧ್ಯಕ್ಷ ವಿಶ್ವನಾಥ್ ನಾಯರ್ ಮಾತನಾಡಿ, ” ಸೊಸೈಟಿ ಬೆಳೆಯಲು ನಿರ್ದೇಶಕರುಗಳ ಬೆಂಬಲ ಮುಖ್ಯ. ಪ್ರತಿಯೊಂದು ನಿರ್ಧಾರಗಳಲ್ಲೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಲ್ಲದೆ ಸದಸ್ಯರು,ನಿರ್ದೇಶಕರ ಸಲಹೆ ಗಳನ್ನು ತಿಳಿಸಬೇಕು. ಅಲ್ಲದೆ ನಾನು ಎಂಬ ಅಹಂಕಾರವನ್ನು ಬಿಟ್ಟು ನಾವು ಎಂಬ ವಾಕ್ಯವನ್ನು ಬಳಸಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ” ಎಂದರು.

ಸೊಸೈಟಿಯ ನಿರ್ದೇಶಕರುಗಳಾದ ಅಬ್ದುಲ್ಲ ಎ, ಬಾಬು ಗೌಡ, ಎಸ್ ಶಂಕರ ಪಾಟಾಳಿ, ಎನ್ ವಾಸುದೇವ, ಪ್ರೇಮ.ಯು, ಕೆ ಆರ್ ಚಂದ್ರಹಾಸ, ಡಾ. ಸಾಯಿ ಗೀತಾ ಜ್ಞಾನೇಶ್, ಕಮಲಾಕ್ಷಿ ವಿ.ಶೆಟ್ಟಿ, ಬಿ.ನಾಗಪ್ಪ ಗೌಡ ಬೊಮ್ಮೆಟ್ಟಿ, ಯಂ. ಸುಬ್ರಹ್ಮಣ್ಯ ಹೊಳ್ಳ, ಎಂ. ಚೆನ್ನಕೇಶವ ಜಾಲ್ಸೂರು, ಹಿಮಕರ ಎಂ,ತುಕರಾಮ ಏನೆಕಲ್ಲು, ಶ್ರೀಧರ ನಾಯಕ ಪಿ, ಕೇಶವ ಸಿಎ, ಸುಧಾಮ ಸೊಸೈಟಿ ಮ್ಯಾನೇಜರ್ ಜಯಂತಿ ಎಂ ಆರ್, ಸಿಬ್ಬಂದಿಗಳಾದ ಅನಿಲ್ ಕುಮಾರ್ ರಶ್ಮಿತಾ ಉಪಸ್ಥಿತರಿದ್ದರು. ಅಬ್ದುಲ್ಲಾ ಎ ಸ್ವಾಗತಿಸಿ, ಬಾಬುಗೌಡ ಈ ವಂದಿಸಿದರು.