ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರು ದೀಪ ಪ್ರಜ್ವಲಿಸಿ “ದೀಪ ಅಂತರಂಗದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗುವಂತಾಗಲಿ” ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ತಾಲೂಕು ಯೋಜನಾಧಿಕಾರಿ ಅವರು ವ್ಯಸನ ಮುಕ್ತ ಬದುಕಿನಿಂದ ಪರಿ ಪೂರ್ಣ ಆರೋಗ್ಯ ಹಾಗೂ ನೆಮ್ಮದಿ ಸಾದ್ಯೆಂದರು.









ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂಬಾಕಿನಿಂದ ತಯಾರಾದ ಬೀಡಿ, ಸಿಗರೇಟ್, ಗುಟ್ಕಾ,ಪಾನ್ ಮಸಾಲ,ಪಾನ್ ಬೀಡಾಗಳು, ನಶೆ ಬರಿಸುವ ವಸ್ತುಗಳನ್ನು ಬಳಸುತ್ತಿದ್ದು, ಅದರ ಚಟಕ್ಕೆ ಬಿದ್ದಿದ್ದಾರೆ. ನಶೆ ಭರಿಸುವ ವಸ್ತುಗಳು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ. ಅದೇ ರೀತಿಯಲ್ಲಿ ಜಾಹಿರಾತಿನ ಮೋಹಕ್ಕೆ ಬಲಿ ಬಿದ್ದು ಮಕ್ಕಳು ಗುಟ್ಕಾ ತಂಬಾಕಿಗೆ ಮಾರುಹೋಗಿ ಜೇವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಹೊರ ಬರಲು ನಮ್ಮ ದೈನಂದಿನ ದಿನಚರಿ, ಅಭ್ಯಾಸ ಗಳನ್ನು ಬದಲಾಯಿಸಿ ಕೊಳ್ಳುಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿಕೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಬಿ.ಕೆ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪಠಾಣಾಧಿಕಾರಿ ಶಶೀನಪ್ಪ, ಕಾಲೇಜಿನ ಉಪನ್ಯಾಸಕರು,ಸುಳ್ಯ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.ಸುಮಾರು 125 ವಿದ್ಯಾರ್ಥಿಗಳು ಮಾಹಿತಿ ಪ್ರಯೋಜನವನ್ನು ಪಡೆದುಕೊಂಡರು.










