ಸುಳ್ಯದಲ್ಲಿ “ಸ್ವರ್ಣಂ ಜ್ಯುವೆಲ್ಸ್ ” ಶುಭಾರಂಭ

12,000 ರೂ.ಗೆ ಚಿನ್ನದ ನೆಕ್ಲೇಸ್, ಆಕರ್ಷಕ ಉಡುಗೊರೆ

0

ನಮ್ಮವರ ಬೆಳವಣಿಗೆಗೆ ನಮ್ಮ ಪ್ರೋತ್ಸಾಹ ಎಂದೆಂದಿಗೂ ಇರುತ್ತದೆ: ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ ನ ಮಾಲಕ ಸಹೋದರರು

ಸುಳ್ಯದಲ್ಲಿ ಚಿನ್ನಾಭರಣಗಳ ಆಯ್ಕೆಗಾಗಿ ಹೊಸದೊಂದು ಮಳಿಗೆ ಸ್ವರ್ಣಂ ಜ್ಯುವೆಲ್ಸ್ ಜು.7 ರಂದು ಕೆ.ಎಸ್ .ಆರ್ .ಟಿ.ಸಿ ಬಸ್ ನಿಲ್ದಾಣದ ಎದುರಿನ ಸುಂತೋಡು ಎಂಪೋರಿಯo ಬಿಲ್ಡಿಂಗ್ ನಲ್ಲಿ ಇಂದು ಶುಭಾರಂಭಗೊಂಡಿತು.

ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ ರವರು ಹೊಸ ಮಳಿಗೆಯನ್ನುಉದ್ಘಾಟಿಸಿ ಶುಭ ಹಾರೈಸಿ, ಸಂಸ್ಥೆಯ ಪಾಲುದಾರರನ್ನು ಸ್ಮರಣಿಕೆ ನೀಡಿ ಗೌರವಿಸಿ, ಮಾತನಾಡಿದರು.

ಸುಳ್ಯದ ಅಕಾಡೆಮಿ ಆಫ್‌ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಡೈಮಂಡ್ ಕೌಂಟರ್ ಅನ್ನು ಉದ್ಘಾಟಿಸಿ, ಮಾತನಾಡಿದರು. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಿದರು. ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಡಾ.ಶ್ರಮಿಕಾ ಸುಂತೋಡು ರವರು ಸ್ವರ್ಣಂ ಸ್ಪೆಷಲ್ ಆಭರಣಗಳನ್ನು ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಗಿರೀಶ್‌ ಭಾರದ್ವಾಜ್‌, ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ , ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಡಾ.ರೇವಂತ್ ಅತಿಥಿಗಳಾಗಿದ್ದರು.

ಚಿನ್ನೋಧ್ಯಮದಲ್ಲಿ 20 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರರೊಂದಿಗೆ ಪ್ರಾರಂಭಗೊಂಡಿರುವ ಈ ಸಂಸ್ಥೆಯ ಪ್ರವೀಣ್ ಬಿ. ಗೌಡ, ಸಂಜೀವ.ಕೆ, ಭವಿತ್.ಯು, ಹಾಗೂ ಲೋಕೇಶ್ ಎಂ.ಎಸ್. ಹಾಜರಿದ್ದರು, ಜನತೆಯ ಸಹಕಾರ ಕೇಳಿದರು. ಅಶ್ವಿನಿ, ಷಡಾಕ್ಷರಿ, ಗೀತಾ, ಸ್ವಾತಿ ಉಪಸ್ಥಿತರಿದ್ದರು. ಪಾಲುದಾರರಾದ ಸಂಜೀವ.ಕೆ ಸ್ವಾಗತಿಸಿ, ಪ್ರವೀಣ್.ಬಿ.ಗೌಡ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು

ಸ್ವರ್ಣಂ ವಿಶೇಷತೆ:ನಗು ಮೊಗದ ಸರ್ವಿಸ್ , ಆರ್ಡರ್ ಸ್ಪೆಷಲಿಸ್ಟ್ , ಗೋಲ್ಡ್ ಟೆಸ್ಟ್ ಮೆಶಿನ್ , ಉಚಿತ ಆಭರಣ ಸರ್ವಿಸ್ , ಡೋರ್ ಡೆಲಿವರಿ ನಾವು ತುರ್ತು ಸಮಯದಲ್ಲಿ ಗ್ರಾಹಕರ ಮನಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡುತ್ತೇವೆ.ಪ್ರತೀ ಖರೀದಿಗೂ ವಿಶೇಷ ಉಡುಗೊರೆ: ಚಿನ್ನ , ಬೆಳ್ಳಿ, ವಜ್ರ ಖರೀದಿಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ಕೊಡಲಾಗುವುದು ಹಾಗೂ ರಿಯಾಯಿತಿ ನೀಡಲಾಗುವುದು.

12,000 ರೂ ಗೆ ಚಿನ್ನದ ನೆಕ್ಲೇಸ್ ಗಳು ಇದೀಗ ನಮ್ಮಲ್ಲಿ:ಮಹಿಳೆಯರಿಗೆ ಮನಕ್ಕೆ ಇಚ್ಚಿಸುವಂತಹ ನೂತನ ಶೈಲಿಯ 15 ಕ್ಕೂ ಹೆಚ್ಚು ಕಲರ್ ಮ್ಯಾಚಿಂಗ್ ಸಾರೀಸ್ ಚಿನ್ನದ ನೆಕ್ಲೇಸ್ ಗಳು ಇದೀಗ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬರೀ 12000 ದ ಒಳಗೆ ನಿಮ್ಮದಾಗಿಸಿಕೊಳ್ಳಬಹುದು. ಗ್ರಾಹಕರ ಮನಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡುತ್ತೇವೆ. ಗ್ರಾಹಕರು ನೂತನ ಮಳಿಗೆಗೆ ಭೇಟಿ ನೀಡಿ ನಮ್ಮಲ್ಲಿರುವ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹವನ್ನು ವೀಕ್ಷಿಸಬೇಕಾಗಿ ” ಸ್ವರ್ಣಂ ಜ್ಯುವೆಲ್ಸ್” ಆಡಳಿತ ಪಾಲುದಾರರು ಪ್ರವೀಣ್ ಗೌಡ . ಬಿ , ಸಂಜೀವ ಕೆ, ಭವಿತ್ ಯು, ಲೋಕೇಶ್ ಎಂ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರೆಮಾಡಿ 7975425067