9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ಶ್ರಮದಾನದಲ್ಲಿ ಭಾಗಿ
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಪರಿಸರದ ಸ್ವಚ್ಛತಾ ಅಭಿಯಾನದ ಮೂರನೇ ವಾರದ ಶ್ರಮದಾನ ಕಾರ್ಯಕ್ರಮ ಆ.10 ರಂದು ನಡೆಯಿತು.








ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಹಸೈನಾರ್ ಜಯನಗರ,ಎಸ್ ಡಿ ಎಂ ಸಿ ಸದಸ್ಯರುಗಳು ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಶಾಲಾ ಪರಿಸರದ ಕಾಡು ಬಳ್ಳಿಗಳನ್ನು ಕಡಿದು ಪರಿಸರ ಸ್ವಚ್ಛತೆಯನ್ನು ಮಾಡಿದರು.

ಶ್ರಮದಾನ ಕಾರ್ಯಕ್ರಮ ಪ್ರತಿ ಭಾನುವಾರ ನಡೆಯಲಿದ್ದು ಶ್ರಮದಾನದಲ್ಲಿ ಭಾಗವಹಿಸಲು ಇಚ್ಛೆಸುವ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಯ ಅಭಿಮಾನಿ ಗಳು ಮತ್ತು ಹಳೆ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಎಸ್ ಡಿ ಎಂ ಸಿ ವತಿಯಿಂದ ಕೇಳಿಕ್ಕೊಂಡಿದ್ದಾರೆ.











