ಮಂಗಳೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಅಧೀಕ್ಷಕರಾಗಿ ನಿವೃತ್ತಿ ಯಾಗಿದ್ದ ಏನೆಕಲ್ಲು ಗ್ರಾಮದ ಕುಶಾಲಪ್ಪ ಗೌಡ ನಾಳ ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ಪ್ರಾಯವಾಗಿತ್ತು.
ನೆನ್ನೆ ಬೆಳಗ್ಗೆ ಮನೆಯಲ್ಲಿರುವಾಗ ಬಿದ್ದು ಬ್ರೈನ್ ಹ್ಯಾಮಾರೆಜ್ ಆಗಿದ್ದ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12.30ರ ವೇಳೆಗೆ ನಿಧನರಾದರು.















ಮೃತರು ಪತ್ನಿ ಶ್ರೀಮತಿ ತಾರಾ, ಪುತ್ರರಾದ ಮನೋಹರ ನಾಳ, ಮಹೇಶ್ ನಾಳ, ಮುರಳಿ ನಾಳ ಹಾಗೂ ಪುತ್ರಿ ಮಧುರ ಕೃಷ್ಣ ಕುಮಾರ್ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ ಸ್ವಗೃಹದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.










