ಗಿರಿಗದ್ದೆ ವೆಂಕಟ್ರಮಣ ಜೋಯಿಸ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಗಿರಿಗದ್ದೆ ಕುಮಾರಪರ್ವತ ಬೆಟ್ಟದ ಬಳಿಯ ನಿವಾಸಿ ವೆಂಕಟ್ರಮಣ ಜೋಯಿಸರವರು ಅಲ್ಪಕಾಲದ ಅಸೌಖ್ಯದಿಂದ ಮೇ.17 ರಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕುಮಾರ ಪರ್ವತ ಬೆಟ್ಟಕ್ಕೆ ಹೋಗುವಾಗ ಅರ್ಧ ದಾರಿಯಲ್ಲಿ ಸಿಗುವ ಇವರ ಮನೆಯಲ್ಲಿ ಅನೇಕ ಚಾರಣಿಗರು ಊಟ ಮಾಡಿ ವಿಶ್ರಾಂತಿ ಪಡೆದು ಹೋಗುತ್ತಿದ್ದರು.

ಪಾಕ ಪ್ರವೀಣರಾಗಿದ್ದ ಇವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದರು.

ಮೃತರ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ನಾಲ್ಕು ಜನ ಸಹೋದರರು, ಇಬ್ಬರು ಸಹೋದರಿಯರು, ಪುತ್ರ ಪರಮೇಶ್ವರ, ಪುತ್ರಿಯರಾದ ವಿದ್ಯಾಸರಸ್ವತಿ, ಶಾರದಾ, ಸೊಸೆ ಅರ್ಚನಾ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.