ಅರೆಕಲ್ಲಿನಲ್ಲಿ ಮನೆಯೊಂದರ ಕಬ್ಬಿಣದ ಗೇಟ್ ಮುರಿದು ತೋಟಕ್ಕೆ ನುಗ್ಗಿದ ಒಂಟಿ ಸಲಗ

0


ಮನೆಯ ಎದುರಿನ ಕಬ್ಬಿಣದ ಗೇಟ್‌ವೊಂದನ್ನು ಒಂಟಿ ಸಲಗವೊಂದು ದಾಳಿ ನಡೆಸಿ ಮುರಿದು ಹಾಕಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಘಟನೆ ಅರೆಕಲ್ಲಿನಲ್ಲಿ ನಡೆದಿದೆ.

ಕೊಡಗು ಸಂಪಾಜೆಯ ಅರೆಕಲ್ಲು ಗ್ರಾಮದ ಲೈನ್ಕಜೆ ಪ್ರಭಾಕರ ಅವರ ಮನೆಯ ಕಬ್ಬಿಣದ ಗೇಟನ್ನು ಒಂಟಿಸಲಗ ಮುರಿದು ಹಾಕಿ ತೋಟಕ್ಕೆ ನುಗ್ಗಿ ಬೆಳೆಯನ್ನು ಹಾಳು ಮಾಡಿ ಅಪಾರವಾದ ನಷ್ಟವನ್ನು ಉಂಟುಮಾಡಿದೆ. ಇತ್ತೀಚೆಗೆ ಒಂಟಿಸಲಗವೊಂದು ಕೆಲವು ದಿನಗಳಿಂದ ರೈತರ ಕೃಷಿಯನ್ನು ನಾಶಮಾಡುತ್ತಾ ಬಂದಿದೆ .ಅರಣ್ಯ ಇಲಾಖೆ ಮತ್ತು ಜನ ಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.