ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ನೂತನ ಪದಾಧಿಕಾರಿಗಳ ಆಯ್ಕೆ

0


ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅರಂತೋಡು ಇದರ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಸಂಘದ ಕಚೇರಿಯಲ್ಲಿ ಜೂ.4 ರಂದು ನಡೆಯಿತು.ಅರಂತೋಡು ಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿದರು .ಮುಖ್ಯ ಅತಿಥಿಯಾಗಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ಅರಂತೋಡು ಜುಮ್ಮಾಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ,ಆಗಮಿಸಿ ನೂತನ ಸಮಿತಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಟಿ.ಎಮ್.ಶಹೀದ್ ತೆಕ್ಕಿಲ್, ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಎಸ್.ಎಮ್
ಉಪಾಧ್ಯಕ್ಷ :ಮನ್ಸೂರು ಕೆ.ಎಮ್ .ಪಾರೆಕ್ಕಲ್, ಪ್ರದಾನ ಕಾರ್ಯದರ್ಶಿ ಫಸೀಲು ಎ. ಜೊತೆ ಕಾರ್ಯದರ್ಶಿ ತಾಜುದ್ದೀನ್ ಎಸ್ ಅರಂತೋಡು, ಜುಬೈರ್ ಎ ಅರಂತೋಡು, ಕೋಶಾಧಿಕಾರಿ:ಹಾಜಿ ಅಜರುದ್ದೀನ್ ಕೆ.ಯು., ನಿರ್ದೇಶಕರು: ಹನೀಫ್ ಎ.ಎ,ಮುಜೀಬ್ ಎ,ಹಬೀಬ್ ರಹ್ಮಾನ್ ಪಟೇಲ್,ಮುಝಮ್ಮಿಲ್ ಕುಕ್ಕುಂಬಳ,ಶಂಸುದ್ದೀನ್ ಕೆ.ಎಮ್.ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಅಲ್ ಹಾಜ್ ಇಸ್ಹಾಖ್ ಬಾಖವಿ,ಹಾಜಿ ಅಶ್ರಫ್ ಗುಂಡಿ,ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್,ಹಾಜಿ ಬದ್ರುದ್ದೀನ್ ಪಟೇಲ್ ರವರನ್ನು ಆಯ್ಕೆ ಮಾಡಲಾಯಿತು.2026-27 ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ನಡೆಯಲಿದ್ದು ಇದರ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ,ರಕ್ತದಾನ ಶಿಬಿರ,ಸ್ವಚ್ಛತೆಯ ಕಾರ್ಯಕ್ರಮ ಸೇರಿದಂತೆ ಐವತ್ತು ಅಂಶಗಳ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗುವುದು ಎಂದು ಗೌರವಾಧ್ಯಕ್ಷ ರಾದ ಟಿ.ಎಮ್ .ಶಹೀದ್ ತೆಕ್ಕಿಲ್ ಹಾಗೂ ಸಂಸ್ಥೆಯ ಅಧ್ಯಕ್ಷ ಮಜೀದ್ ರವರು ತಿಳಿಸಿದರು . ಕಾರ್ಯದರ್ಶಿ ಫಸೀಲ್ ಸ್ವಾಗತಿಸಿ ಕೋಶಾಧಿಕಾರಿ ಹಾಜಿ ಅಜರುದ್ದೀನ್ ವಂದಿಸಿದರು.