ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಯ್ ಕಂದಡ್ಕ ಬೋಪಾಲ್ ಗೆ

0

ಮಧ್ಯಪ್ರದೇಶ ವಿಧಾನಸಭಾ ಹಾಗೂ ಮುಂದಿನ ಲೋಕಸಭಾ ಚುನಾವಣೆ ಯ ಪೂರ್ವಭಾವಿ ಪಕ್ಷದ ಕಾರ್ಯವಿಸ್ತಾರಕ್ಕಾಗಿ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ 10ದಿನಗಳ ಕಾಲ ಭೋಪಾಲ್ ಗೆ ತೆರಳಲಿದ್ದಾರೆ.


ಜೂ.27ರಂದು ಪೂರ್ವಾಹ್ನ 10.30ಕ್ಕೆ “ಮೇರಾ ಬೂತ್ ಸಬ್ ಸೆ ಮಜಬೂತ್ ” ಕಾರ್ಯಕ್ರಮ ದಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರೊಂದಿಗಿನ ಸಂವಾದ ಕಾರ್ಯಕ್ರಮ ದಲ್ಲಿ ಅವರು ಭಾಗವಹಿಸಲಿದ್ದು ಈ ಕಾರ್ಯಕ್ರಮ ವನ್ನು ದೇಶದ್ಯಂತ ಬೂತ್ ಕಾರ್ಯಕರ್ತರು ವೀಕ್ಷಿಸಲಿದ್ದಾರೆ.
ಬಳಿಕ ಮುಂದಿನ 8ದಿನಗಳ ಕಾಲ ಪಕ್ಷವು ಮಧ್ಯಪ್ರದೇಶದಲ್ಲಿ ನಿಯೋಜಿಸಿದ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಸಂಘಟನೆಯ ಕಾರ್ಯವನ್ನು ಕೈಗೊಳ್ಳಲಿದ್ದೇವೆ. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಒಟ್ಟು 5ಜನ ಕಾರ್ಯಕರ್ತರನ್ನು ಪಕ್ಷವು ಆಯ್ಕೆ ಮಾಡಿ ಈ ಕಾರ್ಯಕ್ರಮ ಕ್ಕೆ ಕಳುಹಿಸಿಕೊಡುತ್ತಿದೆ