ಸಂಪಾಜೆ ವಲಯ ಜನಜಾಗೃತಿ ವೇದಿಕೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

0

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನಜಾಗೃತಿ ವೇದಿಕೆ ಸಂಪಾಜೆ ವಲಯ, ಶೌರ್ಯ ಮತ್ತು ವಿಪತ್ತು ನಿರ್ವಹಣಾ ಸಮಿತಿ ಇದರ ವತಿಯಿಂದ ಗಿಡನೆಡುವ ಕಾರ್ಯಕ್ರಮ ತೊಡಿಕಾನ ಗ್ರಾಮದ ಅಜ್ಜನಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಂಪಾಜೆ ವಲಯದ ಜನಜಾಗೃತಿ ಅಧ್ಯಕ್ಷರಾದ ಸೋಮಶೇಖರ್ ಪೈಕ ಚಾಲನೆ ಕೊಟ್ಟರು.


ವಲಯದ ಮೇಲ್ವಿಚಾರಕಿ ಜಯಶ್ರೀಯವರು ಶುಭ ಹಾರೈಸಿದರು. ಶೌರ್ಯ ಘಟಕದ ಸಂಯೋಜಕರಾದ ಚಿದಾನಂದ ಮೂಡನಕಜೆ ಹಾಗೂ ಎಲ್ಲಾ ಸ್ವಯಂ ಸೇವಕರು ಉಪಸ್ಥಿತರಿದ್ದರು.