ನಿಡ್ವಾಳ ಶ್ರೀ ಮಹಾವಿಷ್ಣು ದೇವಳದಲ್ಲಿ -ಷಡಾಧಾರ ಪ್ರತಿಷ್ಠೆ

0

ಇಂದು ಸಂಜೆ ಗರ್ಭನ್ಯಾಸ ಕಾರ್ಯಕ್ರಮ

ಎಣ್ಮೂರು -ಐವತ್ತೊಕ್ಲು ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ದೇವಳದ ಷಡಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ಜೂ.27 ಮತ್ತು ಜೂ.28 ರಂದು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಜೂ.27ರಂದು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯ ಹವಾಚನ ,ಸ್ಥಳ ಶುದ್ದಿ, ವಾಸ್ತು ಪೂಜೆ, ಷಡಾಧಾರಗಳ ಅಧಿವಾಸ , ಪ್ರಸಾದ ವಿತರಣೆ ಜರುಗಿತು.ಜೂ.28 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸಿಂಹ‌ ಲಗ್ನದ ಶುಭ ಮುಹೂರ್ತದಲ್ಲಿ ಆಧಾರ‌ಶಿಲಾ ಪ್ರತಿಷ್ಠೆ,ನಿಧಿ ಕುಂಭ ಪ್ರತಿಷ್ಠೆ, ಷಡಾಧಾರ ಪ್ರತಿಷ್ಠೆ , ಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ನಿಧಿ ಕುಂಭಕ್ಕೆ ನವರತ್ನ ಚಿನ್ನ ಬೆಳ್ಳಿ ಇತ್ಯಾದಿಗಳ ಸಮರ್ಪಿಸಿದರು.


ಶಿಲ್ಪಿ ಈಶ್ವರಚಂದ್ರ,
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಕಾರ್ಯದರ್ಶಿ ಗುರುಪ್ರಸಾದ ತೋಟ,ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕರಿಮಜಲು,ಆಡಳಿತ ಮಂಡಳಿ ಸರ್ವ ಸದಸ್ಯರು,ಪುನರ್ ನಿರ್ಮಾಣ ಸಮಿತಿ ಸರ್ವ ಸದಸ್ಯರು,ವಿವಿಧ ಸಮಿತಿಗಳ ಪದಾಧಿಕಾರಿಗಳು
,ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.


ಇಂದು ಸಂಜೆ (ಜೂ.28 )ಗಂಟೆ 5 ರಿಂದ ಸ್ವಸ್ತಿ ಪುಣ್ಯ ಹವಾಚನ, ಸ್ಥಳ ಶುದ್ದಿ , ಗರ್ಭನ್ಯಾಸ ಹೋಮ, ಇಷ್ಟಕಾನ್ಯಾಸ,ಗರ್ಭನ್ಯಾಸ ಜರುಗಲಿದೆ.

ಮೇ.11 ರಂದು ನಿಂತಿಕಲ್ಲಿನಿಂದ ನಿಡ್ವಾಳದ ವರೆಗೆ ಬೃಹತ್ ವಾಹನ ಮೆರವಣಿಗೆಯೊಂದಿಗೆ ನೂತನ ಗರ್ಭಗುಡಿಗೆ ಶಿಲಾಕಲ್ಲು ಆಗಮನ ನಡೆಯಿತು. ಮೇ.12ರಂದು ಪಾದುಕಾನ್ಯಾಸ ನಡೆಯಿತು.


ಶ್ರೀ ದೇವಳದಲ್ಲಿ ನಡೆದ
ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ದೇವರ ಪುನರ್ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ. ದೋಷಗಳ ಪರಿಹಾರ,ಶ್ರೀ ದೇವರಿಗೆ ಅನುಜ್ಞಾ ಕಲಶ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ನಾಗ ಶಿಲಾ ಪ್ರತಿಷ್ಠಾ ಕಲಶ ಮೊದಲಾದ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.ಶ್ರೀ ದೇವಳವು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದ್ದು ಭಕ್ತಾದಿಗಳ ತನು ಮನ ಧನ ಸಹಕಾರದಿಂದ
ಪೂರ್ಣ ಗೊಳ್ಳಲಿದೆ.