ಕುಂಬರ್ಚೋಡು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರೀದ್ ಹಬ್ಬಾಚರಣೆ

0

ಕುಂಬರ್ಚೊಡು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.


ಸ್ಥಳೀಯ ಖತೀಬರಾದ ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಮಾತನಾಡಿ ಸರಳತೆ,ತ್ಯಾಗ ತಾಳ್ಮೆಗಳೆಂಬ ಅರ್ಥಪೂರ್ಣ ಬದುಕಿನ ಅನಿರ್ವಾಯ ಗುಣಗಳ ಮೂಲಕ ಸಮಾಜದ ಕನಸನ್ನು ಬೆಸೆಯುವ ವೈಚಾರಿಕತೆಯ ಮಹಾ ಘೋಷಣೆಯ ಸ್ಮರಣೆಯೇ ಎಂದು ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಹನೀಫ್ ಕೆ ಎಂ ಉಪಾಧ್ಯಕ್ಷ ಅಬ್ದುಲ್ ಕರೀಂ ಬಿ ಎಂ,ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ,
ಸಿದ್ದಿಕ್ ಹುದವಿ ಸಯ್ಯದ್ಇಸ್ಮಾಹಿಲ್ ಅಡ್ಕರ್, ಅಬ್ದುಲ್ ಖಾದರ್ ಹಾಜಿ ಹಾಗೂ ಜಮಾಅತಿನ ಸದಸ್ಯರು ಭಾಗವಹಿಸಿದ್ದರು.