ಜಯಪ್ರಕಾಶ ಬಿ.ಕೆ. ಕೋಡ್ತುಗುಳಿ(ಆರ್ನೋಜಿ) ನಿಧನ

0

ಕೂತ್ಕುಂಜ ಗ್ರಾಮದ ಕಕ್ಯಾನ ಕೋಡ್ತುಗುಳಿ(ಆರ್ನೋಜಿ) ದಿ.ಬಾಲಕೃಷ್ಣ ಗೌಡರ ಪುತ್ರ ಜಯಪ್ರಕಾಶ ಬಿ.ಕೆ. ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.29ರಂದು ರಾತ್ರಿ ನಿಧನರಾದರು.


ಜೂ.26 ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.


ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇದ್ದುದರಿಂದ ವೈದ್ಯರ ಸಲಹೆ ಮೇರೆಗೆ ಅವರನ್ನು ಜೂ.29 ರಂದು ಸಂಜೆ ಅಂಬ್ಯುಲೆನ್ಸ್ ನಲ್ಲಿ ಮನೆಗೆ ಕರೆತರಲಾಯಿತು.


ಅವರಿಗೆ 52 ವರುಷ ವಯಸ್ಸಾಗಿತ್ತು.ಮೃತರು ತಾಯಿ ಶ್ರೀಮತಿ ಶೀಲಾವತಿ, ಪತ್ನಿ ಶ್ರೀಮತಿ ಧರ್ಮಾವತಿ, ಪುತ್ರ ಕೌಶಿಕ್, ಪುತ್ರಿ ಕಾವ್ಯ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.