ನೋಂದಣಿ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ತೊಂದರೆ

0

ಸರಿಪಡಿಸುವಂತೆ ಅಧಿವಕ್ತಾ ಪರಿಷತ್ ನಿಂದ ಮನವಿ

ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಸುಳ್ಯಘಟಕದ ವತಿಯಿಂದ ಜು.4ರಂದು ನೋಂದಣಿ ಇಲಾಖೆಯಲ್ಲಿ ಕಾವೇರಿ 2.0 ತಂತ್ರಾಂಶದಿಂದ ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸರೇ ಕೋರಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾನೋಂದಣಾಧಿಕಾರಿಗಳಿಗೆ ಸುಳ್ಯ ಸಬ್ ರಿಜಿಸ್ಟ್ರಾರ್ ರವರ ಮುಖಾಂತರ ಮನವಿ ಸಲ್ಲಿಸಲಾಯಿತು.ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಾದ ನ್ಯಾಯವಾದಿ ಜಗದೀಶ್ ಡಿ ಪಿ, ಸುಳ್ಯ ಘಟಕದ ಅಧ್ಯಕ್ಷ ರಾದ ನ್ಯಾಯವಾದಿ ಹರೀಶ್ ಬೂಡುಪನ್ನೆ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಮದುವೆಗದ್ದೆ, ರೆವೆನ್ಯೂ ವಿಭಾಗದ ಮುಖ್ಯಸ್ಥರಾದ ನ್ಯಾಯವಾದಿ ರಂಜಿತ್ ಕುಕ್ಕೇಟಿ , ದಸ್ತಾವೇಜು ಬರಹಗಾರರಾದ ಲಿಂಗಪ್ಪ ಗೌಡ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.