ವಳಲಂಬೆ ಬಳಿ ಶ್ರಮದಾನ ಮೂಲಕ ರಸ್ತೆ ದುರಸ್ತಿ

0

ಗುತ್ತಿಗಾರು ಗ್ರಾಮದ ವಳಲಂಬೆ – ಪೈಕ- ಮೋಹನ ಹಳ್ಳಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದ್ದ ಕಾರಣ ಅದನ್ನು ಶ್ರಮದಾನ ಮೂಲಕ ಜು.11 ರಂದು ದುರಸ್ತಿ ಮಾಡಲಾಯಿತು.

ಮಳೆಗಾಲವಾಗಿದ್ದ ಕಾರಣ ರಸ್ತೆಯೆಲ್ಲಾ ಕೆಸರುಮಯವಾಗಿದ್ದು ಶಾಲಾ ಮಕ್ಕಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಹೋಗಲು ಕಷ್ಟ ಇರುವುದನ್ನು ಮನಗಂಡು ಚರಂಡಿ ವ್ಯವಸ್ಥೆ ಮತ್ತು ರಸ್ತೆಗೆ ಚರಳು ಹಾಕಲು ತಾತ್ಕಾಲಿಕ ದುರಸ್ತಿ ಮಾಡಲಾಯಿತು. ನೂತನ್ ಕಡ್ಯ, ರಮೇಶ್ ಮೋಹನ ಹಳ್ಳಿ. ಕಾರ್ತಿಕ ಮೋಹನಹಳ್ಳಿ ನಿತೀಶ್ ಮೋಹನ ಹಳ್ಳಿ, ರಂಜಿತ್ ಮೋಹನಹಳ್ಳಿ. ಮತ್ತು ಸುಧೀರ್ ನಡುಮನೆ ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.