ಪೆರುವಾಜೆ : ಕುಂಡಡ್ಕದಲ್ಲಿ ರಸ್ತೆ ಮೇಲೆ ಬಿದ್ದ ಬೃಹತ್ ಗಾತ್ರದಮರ-ತೆರವುಗೊಳಿಸಿದ ಬಿಜೆಪಿ ಕಾರ್ಯಕರ್ತರು

0

ಪೆರುವಾಜೆ ಗ್ರಾಮದ ಕುಂಡಡ್ಕ ದಲ್ಲಿ ಭಾರಿ ಗಾತ್ರದ ಮರವೊಂದು ನಿನ್ನೆ ರಾತ್ರಿ ಸಮಯದಲ್ಲಿ ರಸ್ತೆಗೆ ಉರುಳಿಬಿದ್ದು ವಾಹನ ಸವಾರರಿಗೆ ಅಡಚಣೆಯಾಗಿತ್ತು.
ಇಂದು ಬೆಳಗ್ಗೆ ಪುತ್ತೂರುಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರವರು ಆಗಮಿಸಿದ ಬಳಿಕ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಮುಕ್ಕೂರು ಕುಂಡಡ್ಕ ಭಾಗದ ಬಿಜೆಪಿ ಕಾರ್ಯಕರ್ತರು ಸೇರಿ ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದರು.

ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಕುಶಾಲಪ್ಪ ಪೆರುವಾಜೆ, ಸಚಿನ್ ರೈ ಪೂವಾಜೆ, ಗುರುಪ್ರಸಾದ್ ಕುಂಡಡ್ಕ, ದಯಾನಂದ ರೈ ಕನ್ನೆಜಲು, ಐತಪ್ಪ ನಾಯ್ಕ ಕುಂಡಡ್ಕ, ಕಿರಣ್ ಕುಟೀರ, ಕೃಷ್ಣ ಪ್ರಸಾದ್ ಕಾನಾವು, ತಿಮ್ಮ ಕುಂಡಡ್ಕ ಮತ್ತಿತರರು ಸಹಕರಿಸಿದರು.