ಶ್ರೀಮತಿ ಪದ್ಮಾವತಿ ನಾಟಿಕೇರಿ ನಿಧನ

0

ಅಮರಪಡ್ನೂರು ಗ್ರಾಮದನಾಟಿಕೇರಿ ನಿವಾಸಿ ನಾರಾಯಣ ಭಟ್ ರವರ ಪತ್ನಿ ಶ್ರೀಮತಿ ಪದ್ಮಾವತಿ ಎನ್. ರವರು ಹೃದಯಾಘಾತದಿಂದ ಜು.12 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಅವರಿಗೆ ಮನೆಯಲ್ಲಿರುವ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರ ಸಲಹೆಯಂತೆ ಸುಳ್ಯದ

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಪತಿ ನಾರಾಯಣ ಭಟ್ ನಾಟಿಕೇರಿ, ಪುತ್ರರಾದ ಶಿವ ಸುಬ್ರಹ್ಮಣ್ಯ ಎನ್, ಅಶೋಕ ಎನ್, ಸೊಸೆಯಂದಿರಾದ ಶ್ರೀಮತಿ ವಿಜಯಲಕ್ಷ್ಮಿ ಎನ್, ಶ್ರೀಮತಿ ಸ್ವಾತಿ ಎನ್, ಹಾಗೂ ಮೊಮ್ಮಗ ಯಶಸ್ ಎಸ್. ಎನ್ ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.