ಸಿಡಿಪಿಒ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ರಶ್ಮಿ ಅಶೋಕ್ ‌ನೆಕ್ರಾಜೆಯವರಿಗೆ ಸುಳ್ಯದಲ್ಲಿ ಬೀಳ್ಕೊಡುಗೆ

0

ಮಡಿಲು ತುಂಬಿ ‌ಹರಸಿದ‌ ಸಹೋದ್ಯೋಗಿಗಳು

ಸುಳ್ಯದಲ್ಲಿ ಸಿಡಿಪಿಒ ಆಗಿದ್ದು ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿಗೊಂಡ ಶ್ರೀಮತಿ ರಶ್ಮಿ ಅಶೋಕ್ ‌ನೆಕ್ರಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.15 ರಂದು ಸುಳ್ಯದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

ಸಿಡಿಪಿಒ ಶ್ರೀಮತಿ ಶೈಲಜಾ ದಿನೇಶ್ ಅಧ್ಯಕ್ಷತೆ‌ ವಹಿಸಿದ್ದರು.

ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ರವರು ಶ್ರೀಮತಿ ರಶ್ಮಿ ಯವರನ್ನು ಸನ್ಮಾನಿಸಿದರು.

ಸಿಡಿಪಿಒ ‌ಕಚೇರಿ‌ ವತಿಯಿಂದ ಸಹೋದ್ಯೋಗಿಗಳು ಮಡಿಲು ತುಂಬಿಸಿ ಬೀಳ್ಕೊಟ್ಟರು. ರಶ್ಮಿಯವರ‌ ಪತಿ ಅಶೋಕ್‌ ನೆಕ್ರಾಜೆಯವರ ಹುಟ್ಟುಹಬ್ಬವನ್ನು‌ ಕೂಡಾ ಆಚರಿಸಲಾಯಿತು.

ಪಶುಸಂಗೋಪನೆ ಇಲಾಖೆಯ‌ ಮುಖ್ಯ‌ ವೈದ್ಯಾಧಿಕಾರಿ ಡಾ.ನಿತೀನ್ ಪ್ರಭು, ಸುಳ್ಯ‌ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್, ಸುಳ್ಯ ಸರಕಾರಿ ಪದವಿ ಪೂರ್ವ ‌ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ತಾಲೂಕು ಪಂಚಾಯತ್ ‌ಮಾಜಿ ಸದಸ್ಯ ಅಶೋಕ್ ‌ನೆಕ್ರಾಜೆ, ಸುಳ್ಯದ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಹರಿಣಿ ಸದಾಶಿವ ವೇದಿಕೆಯಲ್ಲಿದ್ದರು.

ಮೇಲ್ವಿಚಾರಕಿ ಶ್ರೀಮತಿ ವಿಜಯ ಪ್ರಾರ್ಥಿಸಿದರು.ಪೂಜಾ ಶ್ರೀಮತಿ‌ ರಶ್ಮಿಯವರನ್ನು ಪರಿಚಯಿಸಿದರು
ಮೇಲ್ವಿಚಾರಕಿ ದೀಪಿಕಾ ಸ್ವಾಗತಿಸಿದರು. ‌ಶ್ರೀಮತಿ ರವೀಶ್ರೀ ಕಾರ್ಯಕ್ರಮ ನಿರೂಪಿಸಿದರು.