ಭೂತಕಲ್ಲು ದಿ.ಸೀತಾರಾಮ ಗೌಡರಿಗೆ ಸಾರ್ವಜನಿಕ ಶ್ರದ್ಧಾಂಜಲಿ -ನುಡಿನಮನ

0

ಆಲೆಟ್ಟಿ ಪಂಚಾಯತ್ ಮಾಜಿಸದಸ್ಯರು ,ಆಲೆಟ್ಟಿ ಸೊಸೈಟಿ ಮಾಜಿ ನಿರ್ದೇಶಕರಾದ ಭೂತಕಲ್ಲು ಸೀತಾರಾಮ ಗೌಡರವರು ಜು.4 ರಂದು ದೈವಾಧೀನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವು ಅಮರಶ್ರೀ ಭಾಗ್ ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಜು.19 ರಂದು ನಡೆಯಿತು.

ಮೃತರ ಜೀವನಗಾಥೆಯ ಕುರಿತು ಆಕಾಶವಾಣಿ ಕಲಾವಿದ ವಿನೋದ್ ಮೂಡಗದ್ದೆ ಯವರು ಮಾತನಾಡಿದರು.
ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ದಾಮೋದರ ಗೌಡ ರವರು ನುಡಿ ನಮನ ಸಲ್ಲಿಸಿದರು.
ಆಗಮಿಸಿದ ಬಂಧು ಮಿತ್ರರು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು.
ಉಪನ್ಯಾಸಕ ಯದುಪತಿ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಪದ್ಮಭೂಷಣ ಬಿ.ಎಸ್, ಸೋಮಶೇಖರ ಬಿ.ಎಸ್, ಪುತ್ರಿಯರಾದ ಶ್ರೀಮತಿ ಶಶಿಪ್ರಭಾ ಬಿ.ಎಸ್, ಶ್ರೀಮತಿ ಲತಾ ಬಿ.ಎಸ್, ಶ್ರೀಮತಿ ವೀಣಾ ಬಿ.ಎಸ್,ಶ್ರೀಮತಿ ಶಕುಂತಲಾ ಬಿ.ಎಸ್,ಶ್ರೀಮತಿ ಪೂರ್ಣಿಮಾ ಬಿ.ಎಸ್, ಸೊಸೆಯಂದಿರಾದ ಶ್ರೀಮತಿ ತಾರಾ ,ಶ್ರೀಮತಿ ಆಶಾ, ಅಳಿಯಂದಿರಾದ ಯದುಪತಿ ಗೌಡ ಧರ್ಮಸ್ಥಳ, ಶ್ರೀಧರ ಗೌಡ ಮಠಂದೂರು,
ಉದಯಕುಮಾರ್ ಕಾಸ್ಪಾಡಿ,ಪ್ರಸನ್ನ ವೈ.ಟಿ ಎರ್ಕ ಬಳ್ಪ, ಬಂಧುಗಳಾದ ಲೋಲಜಾಕ್ಷ ಭೂತಕಲ್ಲು, ಅಚ್ಚುತ ಮಾಸ್ತರ್ ನಾರ್ಕೋಡು, ಯತಿರಾಜ್ ಭೂತಕಲ್ಲು, ಸೀತಾರಾಮ ಹೀರೆಬಂಡಾಡಿ, ಮೊಮ್ಮಕ್ಕಳು, ಭೂತಕಲ್ಲು ಮನೆಯವರು, ನಾರ್ಕೋಡು ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.


ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.