ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಂಭ್ರಮದಲ್ಲಿ ರಂಜಿಸಿದ ಸಂಗೀತ ಸಂಭ್ರಮ

0

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಆಚರಣೆಯ ಸಂಭ್ರಮ ಜುಲೈ19 ರಂದು ಸುಳ್ಯ ಕೇರ್ಪಳದ ಭಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಥಮ ಕಾರ್ಯಕ್ರಮವಾಗಿ ಶ್ರೀಮತಿ ಸುಮನ ರಾವ್ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು.


ಸಂಗೀತ ಸಂಭ್ರಮದಲ್ಲಿ ಗಾಯಕರಾಗಿ ಸುಪ್ರಜಾ ರಾವ್ ಪುತ್ತೂರು, ಅಕ್ಷಿತಾ ನೀರ್ಪಾಡಿ, ಮೇಘಾ ಕೃಷ್ಣ ಕಾಯರ್ತೋಡಿ ಭಾಗವಹಿಸಿದ್ದರು. ಮೃದಂಗದಲ್ಲಿ ವಿದ್ವಾನ್ ಜಗದೀಶ್, ವಾಯಲಿನ್ ನಲ್ಲಿ ವಿದ್ವಾನ್ ಬಾಲಕೃಷ್ಣ ಸಾಥ್ ನೀಡಿದರು.


ಪುರಂದರ ದಾಸರ ಕೀರ್ತನೆ ಹಾಗೂ ವಿವಿಧ ಕೀರ್ತನಗಳೊಂದಿಗೆ
ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಭಾಗವಹಿಸಿದ್ದ ನೂರಾರು ಗಣ್ಯರು ಮತ್ತು ವಿದ್ಯಾರ್ಥಿಗಳ ಮನಸ್ಸುಗಳನ್ನು ರಂಜಿಸಿತು.
ಸಂಘದ ಸದಸ್ಯ ಮುರಳೀಧರ ಅಡ್ಡನ ಪಾರೆ ಸ್ವಾಗತಿಸಿ,ವಿಶ್ವನಾಥ ಮೋಟುಕಾನ ವಂದಿಸಿದರು.ಸಂಘದ ಸದಸ್ಯ ಸತೀಶ್ ಹೊದ್ದೆಟ್ಟಿ ಕಾರ್ಯಕ್ರಮ ನಿರೂಪಿಸಿದರು.