ಕುಕ್ಕುಜಡ್ಕ ಶಾಲೆಯ ನಿವೃತ್ತ ಶಿಕ್ಷಕಿ ರತ್ನಾವತಿ ಕೆ.ಯವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ರತ್ನಾವತಿ. ಕೆ ಇವರಿಗೆ ಜು. 15 ರಂದು ಸನ್ಮಾನ ಹಾಗೂ ಬಿಳ್ಕೊಡುಗೆ ಸಮಾರಂಭ ನಡೆಯಿತು. ಎಸ್.ಡಿ. ಎಂ. ಸಿ ಅಧ್ಯಕ್ಷೆ ಮೋಹಿನಿ ಹೆಚ್. ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ, ಮಡಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ದಿವ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯೆ ಲತೇಶ್ವರಿ ಮಾಯಿಪಡ್ಕ ಅವರು ರತ್ನಾವತಿ ಅನಂತ ಭಟ್ ಕಣಿಯಾಲ ದಂಪತಿಗಳಿಗೆ ಶಾಲು, ಫಲಪುಷ್ಪ, ಹಾರ, ಸ್ಮರಣಿಕೆ, ಉಂಗುರ ನೀಡಿ ಗೌರವಿಸಿದರು. ನಿವೃತ್ತಗೊಂಡ ಶಿಕ್ಷಕಿ ರತ್ನಾವತಿಯವರು ಶಾಲೆಯ ಗೇಟಿಗೆ ದ್ವಾರ ಕೊಡುಗೆಯಾಗಿ ನೀಡಿದರು. ಎಸ್.ಡಿ. ಎಂ. ಸಿ ಸದಸ್ಯ ರಾಘವ. ಕೆ ಸ್ವಾಗತಿಸಿ, ಮುಖ್ಯ ಗುರು ಹೇಮಾವತಿ ಎಸ್ ಪ್ರಾಸ್ತಾವಿಕ ಮಾತನಾಡಿ, ನಿವೃತ್ತ ಶಿಕ್ಷಕಿ ಶ್ಯಾಮಲ ಬೊಳ್ಳಾಜೆ ಅಭಿನಂದನಾ ಭಾಷಣ ಮಾಡಿ, ಶಾಲಾ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿ, ಎಸ್. ಡಿ. ಎಂ. ಸಿ ಸದಸ್ಯೆ ತೇಜಾವತಿ ವಂದಿಸಿ, ಎಸ್. ಡಿ. ಎಂ. ಸಿ ಸದಸ್ಯ ವಿನಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.