ಮಹಾಮಳೆಗೆ ದ್ವೀಪವಾಗಿದೆ ಏನೆಕಲ್ಲು

0

ದೇವಸ್ಥಾನದ ಸುತ್ತಲೂ ನೆರೆ ನೀರು; ಮನೆಯವರ ಸ್ಥಳಾಂತರ

ಇಂದು ಬೆಳಿಗ್ಗೆಯಿಂದ ಕೊಲ್ಲಮೊಗ್ರ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ‌ ಮಳೆಯಿಂದಾಗಿ ಹೊಳೆಯಲ್ಲಿ ನೆರೆ ನೀರು ಬಂದು ಯೇನೆಕಲ್ಲಿಗೆ ಜಲಕಂಟಕ ಎದುರಾಗಿದೆ.

ಯೇನೆಕಲ್ಲಿನ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದೆ. ದೇವಸ್ಥಾನದ ಸುತ್ತಲೂ ನೆರೆ ನೀರು ಬಂದಿದೆ.

ನದಿಯ ತಟದಲ್ಲಿರುವ ಕೃಷಿಭೂಮಿಗೂ ಮಳೆ ನೀರು ನುಗ್ಗಿರುವುದಲ್ಲದೆ, ನದೀ‌ತಟದ ಮನೆಗಳೂ‌ ಅಪಾಯದ ಸ್ಥಿತಿಯಲ್ಲಿದೆ.

ರವಿಕುಮಾರ್ ಮತ್ತು ಶಶಿಕಲಾ‌ ಎಂಬವರ ಮನೆಯ ಸಾಮಾಗ್ರಿಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಮನೆಯೊಳಗೆ ನೀರು ಬಂದು ವಾಸಕ್ಕೆ ತೊಂದರೆಯುಂಟಾದರೆ ಸ್ಥಳೀಯ ಶಾಲೆ ಮತ್ತು ಯೇನೆಕಲ್ಲು ಸಹಕಾರಿ ಸಂಘದ ಕಟ್ಟಡದಲ್ಲಿ ಆಶ್ರಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸುದ್ದಿಗೆ ತಿಳಿಸಿದ್ದಾರೆ.