ಕಾಡುಪ್ರಾಣಿ‌ಗಳು ತೋಟಕ್ಕೆ‌ ಬರದಂತೆ ತಡೆಯಲು ವಿದ್ಯುತ್ ತಂತಿ ಅಳವಡಿಕೆ

0

ಮೆಸ್ಕಾಂ ಅಧಿಕಾರಿಗಳಿಂದ ಧಾಳಿ – ಸಲಕರಣೆ ವಶ

ತೋಟಕ್ಕೆ ಕಾಡು ಪ್ರಾಣಿಗಳ ನುಗ್ಗಿ ಹಾವಳಿ ಮಾಡುವುದನ್ನು ತಪ್ಪಿಸಲು ವಿದ್ಯುತ್ ಲೈನ್ ನಿಂದ ನೆಲಕ್ಕೆ ತಂತಿ‌ ಅಳವಡಿಸಿ‌ ವಿದ್ಯುತ್ ಪ್ರವಹಿಸುವಂತೆ ಮಾಡಿ ಅಪಾಯಕಾರಿ ತಂತ್ರ‌ ಅಳವಡಿಸಿರುವ ಮಾಹಿತಿ ಪಡೆದ ಪಂಜ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಂತಿ ಇನ್ನಿತರ ಪರಿಕರವನ್ನು‌ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ಪಂಜ ಸಮೀಪದ ಕೃಷಿಕರೊಬ್ಬರು ಈ ತಂತ್ರ ಅಳವಡಿಸಿರುವುದಾಗಿ ಹೇಳಲಾಗಿದ್ದು, ಮೆಸ್ಕಾಂ ಜೆ.ಇ. ಮನೋಹರ, ಸಿಬ್ಬಂದಿಗಳಾದ ಸದಾಶಿವ, ಮಲ್ಲಣ್ಣ, ಹರ್ಷ ಕುಮಾರ್, ಸುರೇಶ್, ಪ್ರಭು ಎಂಬವರು ನಿನ್ನೆ ರಾತ್ರಿ ಸ್ಥಳಕ್ಕೆ ಹೋಗಿ ಅಲ್ಲಿದ್ದ ಪರಿಕರವನ್ನು ವಶಕ್ಕೆ ಪಡೆದು ಅಪಾಯ ತಪ್ಪಿಸಿದ್ದಾರೆಂದು ತಿಳಿದುಬಂದಿದೆ. ಈ ಕೃತ್ಯ ನಡೆಸಿದ ಕೃಷಿಕರ ಮೇಲೆ ಮೆಸ್ಕಾಂ ಜಾಗೃತ ದಳದವರು ಪ್ರಕರಣ ದಾಖಲಿಸಿಕೊಳ್ಳುವರೆಂದು ಅವರು ತಿಳಿಸಿದ್ದಾರೆ.