ಭಾರತೀಯ ತೀಯ ಸಮಾಜದ ವತಿಯಿಂದ ಓಣಂ ಆಚರಣೆಯ ಪೂರ್ವ ಭಾವಿ ಸಭೆ

0

ಸುಳ್ಯ ಭಾರತೀಯ ತೀಯ ಸಮಾಜ ವಲಯ ಸಮಿತಿ ವತಿಯಿಂದ ಓಣಂ ಆಚರಣೆಯ ಬಗ್ಗೆ ಸಮಾಲೋಚನಾ ಸಭೆಯು ಸುಳ್ಯ ಸಿ. ಎ ಬ್ಯಾಂಕ್ ಸಭಾಭವನದಲ್ಲಿ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆ ಯಲ್ಲಿ ಜು.30 ರಂದುನಡೆಯಿತು.

ಮುಂದಿನ ಸೆ. 3 ರಂದು ಸಂಘದ ಆಶ್ರಯದಲ್ಲಿ ಓಣಂ ಆಚರಣೆ ವಿಶೇಷ ಕಾರ್ಯಕ್ರಮ ನಡೆಸುವ ಬಗ್ಗೆತೀರ್ಮಾನಿಸಲಾಯಿತು.
ಸಮಾಜದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆ ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನುಹಮ್ಮಿಕೊಳ್ಳುವುದಾಗಿನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ
ವಲಯ ಸಮಿತಿ ಕಾರ್ಯದರ್ಶಿ ರಾಜೇಶ್ ಉಬರಡ್ಕ, ಸುಳ್ಯ ನಗರ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ, ಜಾಲ್ಸೂರು ಗ್ರಾಮ ಸಮಿತಿ ಅಧ್ಯಕ್ಷ ಭಾಸ್ಕರ ಅಡ್ಕಾರು, ಕಾರ್ಯದರ್ಶಿ ಜಗದೀಶ್ ಬೇರ್ಪಡ್ಕ, ಸುಳ್ಯ ವಲಯ ಸಮಿತಿಯ ಉಪಾಧ್ಯಕ್ಷೆ ಶಿಲ್ಪಾ ಸುದೇವ್, ಜತೆ ಕಾರ್ಯದರ್ಶಿಗಳಾದ ಪುರುಷೋತ್ತಮ ನಾವೂರು, ವಿಜಯಲಕ್ಷ್ಮಿ ಅಡ್ಕಾರು,ನಗರ ಸಮಿತಿ ಕೋಶಾಧಿಕಾರಿ ವಿನುತ ಜಯನಗರ, ವಲಯ ಸಮಿತಿ ಸದಸ್ಯರಾದ ಅಮ್ಮಣಿ ಟೀಚರ್, ರಾಜೇಶ್ ಅಮೈ, ಯತಿರಾಜ್ ಮಂಡೆಕೋಲು,
ಆಲೆಟ್ಟಿ ಗ್ರಾಮ ಸಮಿತಿ ಕಾರ್ಯದರ್ಶಿ ನಿತಿನ್ ಗುಂಡ್ಯ, ಅರಂತೋಡು ಗ್ರಾಮ ಸಮಿತಿ ಕಾರ್ಯದರ್ಶಿ ಪ್ರದೀಪ್ ಅರಂತೋಡು, ಅಜ್ಜಾವರ ಮಂಡೆಕೋಲು ಗ್ರಾಮ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ ಕಾಂತಮಂಗಲ, ಕಾರ್ಯದರ್ಶಿ ಸುಮಿತ ಮಂಡೆಕೋಲು ಮತ್ತಿತರರು ಉಪಸ್ಥಿತರಿದ್ದರು.