ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆಯ ಬಾಲಕರ ಕಬಡ್ಡಿ ತಂಡ ರಾಜ್ಯ ಮಟ್ಟಕ್ಕೆ

0

ಶಕ್ತಿ ವಿದ್ಯಾ ಸಂಸ್ಥೆ ಮಂಗಳೂರು ಇಲ್ಲಿ ಆ.3ರಂದು ನಡೆದ ವಿದ್ಯಾ ಭಾರತಿಯ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜ್ಞಾನದೀಪ ಎಲಿಮಲೆ ವಿದ್ಯಾ ಸಂಸ್ಥೆಯ ಬಾಲಕರ ಕಬಡ್ಡಿ ತಂಡವು ಉತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನ ಪಡೆದು ಆಗಸ್ಟ್ 16 ಮತ್ತು 17ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಅರ್ಹತೆ ಯನ್ನು ಪಡೆದುಕೊಂಡಿರುತ್ತಾರೆ.

ಅಲ್ಲದೆ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ತಂಡ ರನ್ನರ್ಸ್ ಆಫ್ ಪ್ರಶಸ್ತಿ ಪಡೆದಿದ್ದು ಎಂಟನೇ ತರಗತಿಯ ತೃಶಾ ಹಾಗೂ ಲಕ್ಷ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿಯೂ ಬಾಲಕಿಯರ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದ್ದು, ಒಟ್ಟಾಗಿ ಉತ್ತಮ ಸಾಧನೆ ಮಾಡಿದ್ದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ