ಪಂಜ: ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ತರುಣ್ ಗೆ ಬಹುಮಾನ

0

ಬೆಂಗಳೂರಿನ ಶ್ರೀರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿ ಇಲ್ಲಿ ಜು.30 ರಂದು ಆಯೋಜನೆ ಮಾಡಿದ
ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯ ತಾಲೂಕಿನ ವಿದ್ಯಾರ್ಥಿ ತರುಣ್ 5ನೇ ಸ್ಥಾನ ಪಡೆದಿದ್ದಾರೆ.

ಆಚಾರ್ಯ ಯೋಗ ಯೂತ್ ಕ್ಲಬ್ ಬೆಂಗಳೂರು ಇವರು ನಡೆಸಿದ ಸ್ಪರ್ಧೆಯ 8 ವರ್ಷದ ವಯೋಮಿತಿಯಲ್ಲಿ ಈ ಬಹುಮಾನ ಪಡೆದಿದ್ದಾರೆ.
ಯೋಗ ಗುರು ಶರತ್ ಮರ್ಗಿಲಡ್ಕ ತರಬೇತಿ ನೀಡಿರುವ ಇವರು ಐವತ್ತೊಕ್ಲು ಗ್ರಾಮದ ಅಳ್ಪೆ ಮೇಲ್ಮನೆ ಸೀತಾರಾಮ ಗೌಡ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ. ಕರಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿ.