ಜಂಯ್ಯತ್ತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಗಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್ ಆಯ್ಕೆ

0


ಜಂಯ್ಯತ್ತುಲ್ ಫಲಾಹ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ನ್ಯಾಯವಾದಿ ನೋಟರಿ ಅಬೂಬಕ್ಕರ್ಅಡ್ಕಾರ್ ರವರು ಇತ್ತೀಚೆಗೆ ಮಂಗಳೂರಿನ‌ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆಯಾಗಿರುತ್ತಾರೆ.


ಇವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಂಘ,ಸುಳ್ಯ ತಾಲೂಕು ಅಲ್ಪಸಂಖ್ಯಾತರ ವಿವಿದ್ದೋಶ ಸಹಕಾರಿ ಸಂಘದ ಕಾನೂನು ಸಲಹೆಗಾರರಾಗಿ,ಸುಳ್ಯ ವಕೀಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕಾನೂನು ಸೇವಾ ಪ್ರಾದೀಕಾರದ ಪ್ಯಾನಲ್ ವಕೀಲರಾಗಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ಕಾನೂನು ಸಲಹೆಗಾರರಾಗಿ, ಮಜ್ಲಿಸ್ ಎಜುಕೇಶನ್ ಸೊಸೈಟಿ ಕಾನೂನು ಸಲಹೆಗಾರರಾಗಿ, ಜಾಲ್ಸೂರು ಸೋಷಿಯಲ್ ಫೋರಂ ನಿರ್ದೇಶಕರಾಗಿ,ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಾಗಿ, ಸುಳ್ಯ ತಾಲೂಕು ಜಂಯ್ಯತ್ತುಲ್ ಫಲಾಹ್ ಘಟಕದ ಕೋಶಾಧಿಕಾರಿ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಸ್ತುತ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಕೆ ಆರ್ ಕಾಂಪ್ಲೆಕ್ಸ್ ನೋಟರಿ ಮತ್ತು ವಕೀಲರ ಕಛೇರಿಯನ್ನು ಹೊಂದಿದ್ದಾರೆ.