ಬೆಂಗಳೂರು: ಕೆ.ಡಿ.ಕೆ. ಗೌಡ ಸಮಾಜದ ವತಿಯಿಂದ ಚೆಸ್ ಹಾಗೂ ಕ್ಯಾರಂ ಪಂದ್ಯಾವಳಿ

0

ಬೆಂಗಳೂರಿನ ಕೆ.ಡಿ‌.ಕೆ. ಗೌಡ ಸಮಾಜದ ವತಿಯಿಂದ ಚೆಸ್ ಹಾಗೂ ಕ್ಯಾರಂ ಪಂದ್ಯಾವಳಿಯು ಜು.30ರಂದು ಬೆಂಗಳೂರಿನ ಲಗ್ಗೆರೆಯಲ್ಲಿರುವ ಕೆ.ಡಿ.ಕೆ. ನಮ್ಮನೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ , ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು ಹಾಗೂ ಬೆಂಗಳೂರಿನಿಂದ ಸುಮಾರು 200 ಸ್ಪರ್ದಿಗಳು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಕ್ಯಾರಂ ಆಟಗಾರರಾದ ಕೆ .ಜೆ . ಪೌಲ್ ರವರು ಸ್ಪರ್ದಿಗಳಿಗೆ ಸಲಹೆ ಸೂಚನೆಗಳೊಂದಿಗೆ ಶುಭ ಹಾರೈಸಿದರು .


ವೇದಿಕೆಯಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷಿಣಿ ಶ್ರೀಮತಿ ಶಶಿಪ್ರಭಾ ಮಡ್ತಿಲ , ಯುವ ವೇದಿಕೆ ಅಧ್ಯಕ್ಷೆ ಶ್ರೀಮತಿ ನೇಹಾ ರೋಷನ್ ಪೊರೆಯನ ಇದ್ದರು. ಸಮಾಜದ ಯುವ ವೇದಿಕೆಯ ಅಧ್ಯಕ್ಷೆ ಹಾಗೂ ಅವರ ತಂಡ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದ್ದರು.
ಬೆಂಗಳೂರಿನ ಕೆ.ಡಿ. ಕೆ. ಗೌಡ ಸಮಾಜದ ಅಧ್ಯಕ್ಷ ರವೀಂದ್ರನಾಥ ಕೇವಳ ಅವರು ಸ್ವಾಗತಿಸಿದರು. ಜತಿನ್ ಕಟ್ಟತನ ಪ್ರಾರ್ಥಿಸಿ, ಸಮಾಜದ ಉಪಾಧ್ಯಕ್ಷ ಪಾಣತ್ತಲೆ ಪಳಂಗಪ್ಪ ಅವರು ವಂದಿಸಿದರು.