ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿಸಿದ ಎಂ ವೆಂಕಪ್ಪ ಗೌಡ

0

ಸುಳ್ಯದ ಗಾಂಧಿನಗರದ ಕಲ್ಕುಡ ದೇವಸ್ಥಾನದ ಬಳಿ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿದ್ದು ವಾಹನ ಸವಾರರಿಗೆ, ಜನಸಾಮಾನ್ಯರಿಗೆ ತೊಂದರೆಯುಂಟಾಗುತ್ತಿತ್ತು.

ಇದನ್ನು ಮನಗಂಡ ನಗರ ಪಂಚಾಯತ್ ಸದಸ್ಯ ಮತ್ತು ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ ವೆಂಕಪ್ಪ ಗೌಡರು ತಮ್ಮದೇ ಸ್ವಂತ ಖರ್ಚಿನಿಂದ 1 ಚೀಲ ಸಿಮೆಂಟ್,5 ಚೀಲ ಹೊಯ್ಯಿಗೆ, 5 ಚೀಲ ಜಲ್ಲಿ ಯಿಂದ ಆ 6ರಂದು ಹೊಂಡಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಭವಾನಿಶಂಕರ್ ಕಲ್ಮಡ್ಕ, ಅಬ್ದುಲ್ ರಜಾಕ್, ರಾಜು ಪಂಡಿತ್ ಅಕ್ಷತ್ ಬೀರಮಂಗಿಲ, ಹಾಗೂ ಕಲ್ಕುಡ ದೈವಸ್ಥಾನದ ಅರ್ಚಕ ತಿಮ್ಮಪ್ಪ ಗೌಡ ನಾವೂರು,ಆದರ್ಶ ಆಯಿಲ್ ಮಿಲ್ ನ ಕೇಶವ ಆಚಾರ್ಯ ಉಪಸ್ಥಿತರಿದ್ದರು. ಸ್ಥಳೀಯರಾದ ಮಹಾಲಿಂಗ ಮತ್ತು ತಂಡದವರು ಸಹಕರಿಸಿದರು.