ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವ್ಹೀಲ್ ಚಯರ್ ಕೊಡುಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ಪಂಜ ವಲಯದ ಬಳ್ಪ ಕಾರ್ಯಕ್ಷೇತ್ರದ ಐತ್ತ ಮತ್ತು ಚಿನ್ನಪ್ಪ ಇವರಿಗೆ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಿಲ್ ಚಯರ್ ವಿತರಣೆ ನಡೆಯಿತು. ಬಳ್ಪ ಒಕ್ಕೂಟದ ಅಧ್ಯಕ್ಷರಾದ ಜಗನ್ನಾಥ ಪಲ್ಲತ್ತಡ್ಕ ಫಲಾನುಭವಿಗಳಿಗೆ ವ್ಹೀಲ್ ಚಯರ್ ವಿತರಿಸಿದರು.

ಈ ಸಂದರ್ಭದಲ್ಲಿ ಪಂಜ ವಲಯದ ಮೇಲ್ವಿಚಾರಕರಾದ ಶ್ರೀಮತಿ ಕಲಾವತಿ, ಬಳ್ಪ ಒಕ್ಕೂಟದ ಕಾರ್ಯದರ್ಶಿ ತುಕಾರಾಮ ಕೋಡಿ, ಬಳ್ಪ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.