ಆ.13 ಬಾಳುಗೋಡಿನಲ್ಲಿ ಆಟಿಡೊಂಜಿ ಕೆಸರ್ದ ಗೊಬ್ಬು

0

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಆಶ್ರಯದಲ್ಲಿ ಆ.13 ರಂದು ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ ಪುಣೇರಿ, ಬಾಳುಗೋಡು ಇಲ್ಲಿ ನಡೆಯಲಿದೆ.

ಆ ಪ್ರಯುಕ್ತ ಸುಳ್ಯ -ಕಡಬ ತಾಲೂಕು ಮಟ್ಟದ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಹಾಗೂ ಬಾಳುಗೋಡು, ಹರಿಹರ ಪಲ್ಲತಡ್ಕ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳನ್ನೊಳಗೊಂಡ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಮತ್ತು ವಿವಿಧ ಆಟೋಟಗಳ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.

ಸುಳ್ಯ ಕಡಬ ತಾಲೂಕು ಮಟ್ಟದ ಮುಕ್ತ ತಂಡಗಳ ಕೆಸರುಗದ್ದೆ ಹಗ್ಗಜಗ್ಗಾಟದಲ್ಲಿ ಪುರುಷರಿಗೆ ಪ್ರಥಮ ಬಹುಮಾನವಾಗಿ 5000 ನಗದು,
ದ್ವಿತೀಯ ಬಹುಮಾನವಾಗಿ 3000 ನಗದು, ಮಹಿಳೆಯರಿಗೆ ಪ್ರಥಮ ಬಹುಮಾನ 4000 ನಗದು, ದ್ವಿತೀಯ ಬಹುಮಾನ 2500 ನಗದು ಹಾಗೂ ಫಲಕಗಳು ಇರಲಿದೆ.

ಸೀಮಿತ ಗ್ರಾಮಗಳ ಸ್ಪರ್ಧೆಯಲ್ಲಿ ಪುರುಷರಿಗೆ ವಾಲಿಬಾಲ್ ಸ್ಪರ್ಧೆ ಇರಲಿದ್ದು ಪ್ರಥಮ ಬಹುಮಾನವಾಗಿ 3000, ದ್ವಿತೀಯ ಬಹುಮಾನ 2000 ನಗದು ಹಾಗೂ ಫಲಕಗಳು ಇರಲಿದೆ. ಇದಲ್ಲದೆ ಕಂಬ ಸುತ್ತು ಓಟ, 3 ಕಾಲು ಓಟ, ಉಪ್ಪು ಮುಡಿ, ದಂಡ ಹಾರುವ ಓಟ ನಡೆಯಲಿದೆ.


ಮಹಿಳೆಯರಿಗೆ ತ್ರೋಬಾಲ್ ಗೆ ಪಂದ್ಯ ನಡೆಯಲಿದ್ದುಪ್ರಥಮ ಬಹುಮಾನ 3000 ನಗದು,ದ್ವಿತೀಯ ಬಹುಮಾನವಾಗಿ 2000 ನಗದು ಮತ್ತು ಶಾಶ್ವತ ಫಲಕಗಳು ಇರಲಿದೆ. ಹಾಗೂ ಜಾರುಕಂಬ ನಡಿಗೆ ಸ್ಪರ್ಧೆ, ಹಾಳೆಯಲ್ಲಿ ಎಳೆಯುವುದು, ತಟ್ಟೆಯಲ್ಲಿ ನೀರು ದಾಟಿಸುವುದು, ಕೆಸರು ಕುಡಿಕೆ ಆಟ ನಡೆಯಲಿದೆ. ವಿಶ್ವ ಯುವಕ ಮಂಡಲ ಮಾಜಿ ಅಧ್ಯಕ್ಷ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ವ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಕಿರಿಭಾಗ ಅಧ್ಯಕ್ಷತೆ ವಹಿಸಿದ್ದಾರೆ.