ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಸುಳ್ಯ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸುಳ್ಯ ಘಟಕ ವತಿಯಿಂದ ಸೆಪ್ಟೆಂಬರ್ 3 ರಂದು ಬೆಳ್ಳಾರೆಯ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಆ.6 ರಂದು ಬೆಳ್ಳಾರೆಯ ಮಹಿಳಾ ಮಂಡಲದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಎನ್. ಎಸ್. ಡಿ ವಿಠಲ ದಾಸ್, ಕಾರ್ಯದರ್ಶಿಯಾದ ನವೀನ್ ಸಾರಕೆರೆ, ಸುಳ್ಯ ಘಟಕದ ಯುವವಾಹಿನಿಯ ಸ್ಥಾಪಕ ಅಧ್ಯಕ್ಷ ಶಿವಪ್ರಸಾದ್ ಕೆ. ವಿ, ಸುಳ್ಯ ಘಟಕ ಯುವವಾಹಿನಿ ಅಧ್ಯಕ್ಷ ಲೋಹಿತ್ ರೆಂಜಾಳ, ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಹೈದಂಗೂರು ಹಾಗೂ ಅನಿಲ್ ಪೂಜಾರಿ ಕುತ್ಯಾಡಿ, ಸುಳ್ಯ ಯುವವಾಹಿನಿ ಘಟಕದ ಕೋಶಾಧಿಕಾರಿ ಸುನಿಲ್ ಪಟ್ಟೆ, ಬಿಲ್ಲವ ಸಂಘದ ಸದಸ್ಯರಾದ ಗಿರೀಶ್ ಪೂಜಾರಿ ಕೊಲ್ಯ ಹಾಗೂ ಬೃಂದಾ ಪೂಜಾರಿ ಮುಕ್ಕೂರು ಈ ಸಂದರ್ಭದಲ್ಲಿ ಉಪಸಿತರಿದ್ದರು.