ಚೆಂಬು ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷರಾಗಿ ತೀರ್ಥರಾಮ ಪೂಜಾರಿಗದ್ದೆ ಉಪಾಧ್ಯಕ್ಷರಾಗಿ ಶಾರದ ಸೂರ್ಯ ಆಯ್ಕೆ

0


ಚೆಂಬು ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂರು ಮಂದಿ ಕಣದಲ್ಲಿ ಇದ್ದು ಅಧ್ಯಕ್ಷತೆಗೆ ತೀರ್ಥರಾಮ ಪೂಜಾರಿಗದ್ದೆ ಕಾಂಗ್ರೇಸ್‌ನಿಂದ ಶಶಿಕಲಾ ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಶಾರದ ಸೂರ್ಯ ನಾಮಪತ್ರ ಸಲ್ಲಿಸಿದ್ದರು.


ಕಾಂಗ್ರೇಸ್ ನಿಂದ ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಲಿಲ್ಲ. ಬಿಜೆಪಿಯ ತೀರ್ಥರಾಮ ರವರು ಆರು ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಕಾಂಗ್ರೇಸ್ ಅಭ್ಯರ್ಥಿ ಶಶಿಕಲಾ ನಾಲ್ಕು ಮತ ಪಡೆದು ಪರಭಾವಗೊಂಡರು. ಉಪಾಧ್ಯಕ್ಷತೆ ಕಣದಲ್ಲಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಬಿಜೆಪಿಯ ಶಾರದ ಸೂರ್ಯ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯನ್ನು ಕೊಡಗು ತೋಟಗಾರಿಕಾ ಅಧಿಕಾರಿ ಪ್ರಮೋದ್ ಮತ್ತು ಪಂಚಾಯತ್ ಅಭಿವೃಧಿ ಅಧಿಕಾರಿ ಮಹದೇವ್ ಪ್ರಭು ಚುನಾವಣೆ ನಡೆಸಿಕೊಟ್ಟರು.


ಪಂಚಾಯತ್ ಸಿಬ್ಬಂದಿ ಸಹಕರಿಸಿದರು. ಚುನಾವಣಾ ಸಂರ್ಭದಲ್ಲಿ ಬಿಜೆಪಿಯಿಂದ ನಾಗೇಶ ಕುಂದಲ್ಪಾಡಿ, ಸುಬ್ರಮಣ್ಯ ಉಪಾಧ್ಯಯ, ಕೊಡಗು ಸಂಪಾಜೆ ಸಹಕಾರಿ ಅಧ್ಯಕ್ಷ ಅನಂತ, ಸೂರಾಜ್ ಹೊಸೂರು , ರವಿ ಹೊಸೂರು ಸೇರಿದಂತೆ ಹಲವರು ಪ್ರಮುಖ ಮುಖಂಡರು ಇದ್ದರು.