ಅರಂತೋಡು, ಮರ್ಕಂಜ ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಗಳೇ ಗೆದ್ದಿದ್ದಾರೆ : ಹರೀಶ್ ಕಂಜಿಪಿಲಿ

0

ಅರಂತೋಡು ಗ್ರಾ.ಪಂ. ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಮರ್ಕಂಜ ಗ್ರಾ.ಪಂ. ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮಂಡಲ ಸಮಿತಿ ಸೂಚಿಸಿದ ಅಧಿಕೃತ ಅಭ್ಯರ್ಥಿಗಳೇ ಗೆದ್ದಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ “ಸುದ್ದಿ” ಗೆ ತಿಳಿಸಿದ್ದಾರೆ.

ಅರಂತೋಡಿನಲ್ಲಿ ಕೇಶವ ಅಡ್ತಲೆಯವರಿಗೆ ಮತ್ತು ಶಿವಾನಂದ ಕುಕ್ಕುಂಬಳ ಅವರಿಗೆ ತಲಾ ಹದಿನೈದು ತಿಂಗಳ ಅವಧಿಯ ಅಧ್ಯಕ್ಷತೆ ಮತ್ತು ಮೊದಲ ಹದಿನೈದು ತಿಂಗಳು ಕೇಶವ ಅಡ್ತಲೆ ಅಧ್ಯಕ್ಷರು ಎಂದು ಪಕ್ಷದ ಮಂಡಲ ಸಮಿತಿ ಘೋಷಣೆ ಮಾಡಿ ಬಂದಿತ್ತು. ಆದರೆ ಬಳಿಕವೂ ನಾಮಪತ್ರ ಸಲ್ಲಿಸಿದ್ದ ಶಿವಾನಂದರು ನಾಮಪತ್ರ ವಾಪಾಸ್ ಪಡೆಯದೇ ಇದ್ದುದರಿಂದ ಚುನಾವಣೆ ಅನಿವಾರ್ಯವಾಯಿತು.

ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷತೆ ಚುನಾವಣೆಯಲ್ಲೂ ಪಕ್ಷ ಸೂಚಿಸಿದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅವರ ಜತೆ ಸ್ಪರ್ಧಿಸಿದವರಿಗೆ ಅವರ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಮತ ಮಾತ್ರ ದೊರೆತಿದೆ ಎಂದು ಕಂಜಿಪಿಲಿ ತಿಳಿಸಿದ್ದಾರೆ.