ಮಂಡೆಕೋಲಿನಲ್ಲಿ ‌ಮರಣ ಸಾಂತ್ವನ ನಿಧಿ‌ ಹಸ್ತಾಂತರ

0

ಮಂಡೆಕೋಲು ಸಹಕಾರ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ಮೂವರ ಮನೆಯವರಿಗೆ ಮರಣ ಸಾಂತ್ವನ ನಿಧಿ ಹಸ್ತಾಂತರ ಮಾಡಲಾಯಿತು.
ಸಂಘದ ನಿರ್ದೇಶಕರು, ಮಾಜಿ ಉಪಾಧ್ಯಕ್ಷರು ಆಗಿದ್ದ ಬಾಬಣ್ಣ ರೈ ಪೇರಾಲುಗುತ್ತು ಇವರ ಮನೆಯವರಿಗೆ ಆ.10 ರಂದು ಮರಣ ಸಾಂತ್ವನ ನಿಧಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಪಿ ಜಿ ಹಾಗೂ ನಿರ್ದೇಶಕರಾದ ಸುರೇಶ್ ಕಣೆಮರಡ್ಕ ಪ್ರಭಾರ ಮುಖ್ಯಕಾರ್ಯನಿರ್ವಹಣಾದಿಕಕಾರಿ ಉದಯಕುಮಾರ್ ಜಿ ಹಾಗೂ ಸಂಘದ ಸಿಬಂದಿ ಪದ್ಮನಾಭ ಪಿ ಸಹಕರಿಸಿದರು.

ಅದೇ ರೀತಿ ಶಿವಪ್ಪ ಗೌಡ ಕೊಡೆಂಚಿಕಾರ್ ರವರ ಮನೆಯವರಿಗೆ‌ ಹಾಗೂಹುಕ್ರಪ್ಪ ಗೌಡ ಮಂಡೆಕೋಲು ರವರ ಮನೆಯವರಿಗೂ ಸಾಂತ್ವನ ನಿಧಿ ಹಸ್ತಾಂತರ ‌ನಡೆಯಿತು.